ಅಕ್ರಮ ದಾಸ್ತಾನು ಇರಿಸಿದ್ದ 760 ಕೆ.ಜಿ. ಪಟಾಕಿ ವಶ

Share with

ಪೊಲೀಸರು ಶಿವಪ್ರಸಾದ್ ಠಾಕೂರು ಎಂಬವರ ಗೋಡಾನ್‌ಗೆ ದಾಳಿ ನಡೆಸಿದರು.

ಮಣಿಪಾಲ: ಪರ್ಕಳದ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಯನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಖಚಿತ ಮಾಹಿತಿಯಂತೆ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ತಂಡ ಪರ್ಕಳ ಮುಖ್ಯಪೇಟೆಯ ದಿನಸಿ ಅಂಗಡಿಯ ಹಿಂಬದಿಯಲ್ಲಿದ್ದ ಶಿವಪ್ರಸಾದ್ ಠಾಕೂರು ಎಂಬವರ ಗೋಡಾನ್‌ಗೆ ದಾಳಿ ನಡೆಸಿದ್ದು, ಪರವಾನಿಗೆ ಇಲ್ಲದೆ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು 760ಕೆ.ಜಿ. ತೂಕದ ಪಟಾಕಿಗಳನ್ನು ವಶಪಡಿಸಿಕೊಂಡಿದೆ.

ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಭೀಮಸೇನಾ ಕುಲಕರ್ಣಿ ಹಾಜರಿದ್ದರು. ಈ ಬಗ್ಗೆ ಶಿವಪ್ರಸಾದ್ ಠಾಕೂರು ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


Share with

Leave a Reply

Your email address will not be published. Required fields are marked *