ಪುತ್ತೂರು: ಕೆಮ್ಮಾಯಿ ಚಿಕ್ಕಮುಡ್ನೂರು ಗ್ರಾಮದ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಆ.15ರಂದು 77 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಸ್ವಾತಿ ಗಣೇಶ್ ಧ್ವಜಾರೋಹಣ ನೆರವೇರಿಸಿದರು. ಅಂಗನವಾಡಿ ಪುಟಾಣಿಗಳು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಖಿದರು. ಅಂಗನವಾಡಿ ಪುಟಾಣಿಗಳಾದ ಆರಾಧ್ಯ, ಪೂರ್ವಿಕಾ, ಶ್ರಿಯಾನ್, ಕುಶಾನ್ಯ, ಲಹರಿ ಸ್ವಾತಂತ್ರ್ಯೋತ್ಸವದ ಕುರಿತ ಭಾಷಣಗೈದರು.
![ಅಂಗನವಾಡಿ](https://i0.wp.com/veekshakavani.com/wp-content/uploads/2023/08/ಅಂಗನವಾಡಿ.jpg?resize=640%2C400&ssl=1)
ಈ ಸಂದರ್ಭದಲ್ಲಿ ಬನ್ನೂರು ಪಂ. ಮಾಜಿ ಸದಸ್ಯ ತಿಮ್ಮಪ್ಪ ಗೌಡ, ಸ್ವಸಹಾಯ ಸಮಘ ಒಕ್ಕೂಟ ಅಧ್ಯಕ್ಷೆ ವಿದ್ಯಾ, ಸಂಜೀವಿನಿ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಧನಲಕ್ಷ್ಮೀ, ಸ್ವಸಹಾಯ ಸಂಘದ ಸದಸ್ಯರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಅಂಗನವಾಡಿ ಕಾರ್ಯಕರ್ತೆ ಅರುಣಾರವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.