ಉಡುಪಿ: 2023-24ರ ಸಾಲಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಆಯುರ್ವೇದ ಪಂಚಕರ್ಮ (ಎಂ.ಡಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಸುರಕ್ಷಾ.ಎಸ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸ್ವರ್ಣ ಪದಕ ಪಡೆದುಕೊಂಡಿದ್ದಾರೆ.
![ಆಯುರ್ವೇದ ಪಂಚಕರ್ಮ (ಎಂ.ಡಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಡಾ.ಸುರಕ್ಷಾ.ಎಸ್ ಅವರು ರಾಜ್ಯಕ್ಕೆ ಪ್ರಥಮ](https://i0.wp.com/veekshakavani.com/wp-content/uploads/2024/03/ಡಾ.ಸುರಕ್ಷಾ.ಎಸ್.jpg?resize=640%2C400&ssl=1)
ಇವರು ಈ ಹಿಂದೆ ನಡೆದ ಯುಜಿ ಮತ್ತು ಪಿಜಿಯ ಎಲ್ಲಾ ವಿಭಾಗದಲ್ಲೂ ರಾಂಕ್ ಗಳನ್ನು ಪಡೆದಿರುತ್ತಾರೆ . ಇವರು ಉಡುಪಿಯ ಮಧ್ವ ನಗರದ ಶಿಕ್ಷಕ ಶಿಕ್ಷಕಿಯರಾದ ಸುರೇಶ್ ಭಟ್ ಕಾಶಿ ಹಾಗೂ ಸುಮನಾ ಭಟ್ ಅವರ ಪುತ್ರಿ.