![ಕಾಂಗ್ರೆಸ್ನಲ್ಲಿ](https://i0.wp.com/veekshakavani.com/wp-content/uploads/2023/08/ಕಾಂಗ್ರೆಸ್ನಲ್ಲಿ.jpg?resize=640%2C400&ssl=1)
‘ಲೋಕ’ ಸಮರಕ್ಕೆ ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
28 ಕ್ಷೇತ್ರಗಳ ಪೈಕಿ 1 ಕಡೆ ಮಾತ್ರ ಹಾಲಿ ಸಂಸದರಿದ್ದಾರೆ. 2019ರಲ್ಲಿ ಕಣಕ್ಕಿಳಿದಿದ್ದ KH ಮುನಿಯಪ್ಪ ಶಾಸಕರಾಗಿದ್ದರೆ, ಖರ್ಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಕಾಂಗ್ರೆಸ್ 20ಕ್ಕಿಂತ ಹೆಚ್ಚು ಕಡೆ ಪ್ರಬಲ ಅಭ್ಯರ್ಥಿಗಳನ್ನು ಹುಡುಕಬೇಕಾಗಿದ್ದು, ಈಗಲೇ ಈ ಕೆಲಸ ಶುರು ಮಾಡಿದರೆ ಪ್ರಚಾರಕ್ಕೆ ಸುಲಭವಾಗುತ್ತದೆ ಎಂಬುದು ಪಕ್ಷದ ಲೆಕ್ಕಾಚಾರ.