ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ್ ಅರೆಮಂಗಿಲ ಸುಬ್ಬಣ್ಣ ನಾಯ್ಕ ಅಸೌಖ್ಯದಿಂದ ನಿಧನ

Share with

ಪೆರ್ಲ : ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ್
ಅರೆಮಂಗಿಲ ಸುಬ್ಬಣ್ಣ ನಾಯ್ಕ ಪಿ. (53) ಅಲ್ಪ ಕಾಲದ ಅಸೌಖ್ಯದಿಂದ ಆ.16ರಂದು ತಡರಾತ್ರಿ ನಿಧನರಾದರು. ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದ ಇವರು ತಮ್ಮ ಅರೆಮಂಗಿಲ ಸ್ವಗೃಹಧದಲ್ಲಿ ನಿಧನರಾಗಿದ್ದಾರೆ.


ಪಳ್ಳಕಾನ ನಿವಾಸಿ ದಿ.ರಾಮನಾಯ್ಕ – ಕಾವೇರಿ ದಂಪತಿ ಪುತ್ರ ಸುಬ್ಬಣ್ಣ ನಾಯ್ಕ ಆರಂಭದಲ್ಲಿ ಕೆಎಸ್ಸಾರ್ಟಿಸಿ ಇಲಾಖೆಯಲ್ಲಿ ಸರಕಾರಿ ಸೇವೆಗೆ ನಿಯುಕ್ತರಾಗಿ ಬಳಿಕ ಕಂದಾಯ ಇಲಾಖೆಯ ವಿಲೇಜ್ ಆಫೀಸರ್ ಆಗಿ ವಿವಿಧ ಕಡೆಗಳಲ್ಲಿ ಸೇವೆಗೈದಿದ್ದಾರೆ. ಶೇಣಿ, ಪೆರ್ಲ,ಕಾಟುಕುಕ್ಕೆ,ಬಾಯಾರು,ಮೀಂಜ ಮೊದಲಾದ ಕಡೆಗಳಲ್ಲಿ ವಿಲೇಜ್ ಅಧಿಕಾರಿಯಾಗಿದ್ದ ಇವರು ಬಳಿಕ ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ್ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಭವಾನಿ, ಮಕ್ಕಳಾದ ಜಿತಿನ್ ಎಸ್, ನಿವೇದ್ ಹಾಗೂ ಸಹೋದರರಾದ ಈಶ್ವರ ನಾಯ್ಕ, ಗಣೇಶ (ಕೇರಳ ಗ್ರಾಮೀಣ ಬ್ಯಾಂಕ್ ಉದ್ಯೋಗಿ), ಸಹೋದರಿಯರಾದ ದೇವಕಿ, ಗೌರಿ ಅವರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *