ಸಮುದ್ರದ ಆಳದಲ್ಲಿ ಮೀನುಗಾರನಿಗೆ ಹೃದಯಾಘಾತ: ರಕ್ಷಣೆ

Share with

ಮೀನುಗಾರ ವಸಂತ ಎಂಬವರಿಗೆ ಹೃದಯಾಘಾತವಾಗಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಇತರ ಬೋಟಿನ ಮೀನುಗಾರರು ಕೋಸ್ಟ್ ಗಾರ್ಡ್ ಗೆ ತುರ್ತು ಕರೆ ಮಾಡಿ ವಸಂತ ಅವರನ್ನು ರಕ್ಷಣೆ ಮಾಡಲಾಯಿತು.

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನಿಗೆ ಸಮುದ್ರದ ಮಧ್ಯದಲ್ಲಿ ಹೃದಯಾಘಾತವಾದ ಘಟನೆ ನಡೆದಿದೆ. ಪಣಂಬೂರು ತೀರದಿಂದ ಬೇಬಿ ಮೇರಿ ಬೋಟ್ ನಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ವಸಂತ ಎಂಬವರಿಗೆ ಹೃದಯಾಘಾತವಾಗಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಇತರ ಬೋಟಿನ ಮೀನುಗಾರರು ಕೋಸ್ಟ್ ಗಾರ್ಡ್ ಗೆ ತುರ್ತು ಕರೆ ಮಾಡಿ ತಿಳಿಸಿದ್ದರು.

ಬಳಿಕ ವಸಂತ ಅವರಿಗೆ ಸಮುದ್ರ ಮಧ್ಯದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ದಡಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಮೀನುಗಾರ ಚೇತರಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *