![](https://i0.wp.com/veekshakavani.com/wp-content/uploads/2024/05/veekshakavani-news-template-1-6.jpg?resize=640%2C400&ssl=1)
ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಬೋಳಂತೂರು ಒಕ್ಕೂಟದ ಧರ್ಮನಿಧಿ ಒಕ್ಕೂಟದ ಸದಸ್ಯೆ ಸೀತಾ ಅವರ ಪತಿ ರಾಮಚಂದ್ರ ಆಚಾರ್ಯರವರ ವೈದ್ಯಕೀಯ ಚಿಕಿತ್ಸೆಗೆ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ರೂ 85,000 /- ಮಂಜುರಾಗಿದ್ದು ಅದರ ಚೆಕ್ಕನ್ನು ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಿಟ್ಲ ಯೋಜನಾ ಕಚೇರಿಯ ಆಡಳಿತ ಪ್ರಬಂಧಕರಾದ ವಾಣಿ, ಹಣಕಾಸು ಪ್ರಬಂಧಕರಾದ ರತ್ನಾವತಿ. ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.