ಕಾಸರಗೋಡು: ಜಿಲ್ಲಾ ನೋಂದಣಾಧಿಕಾರಿಯ ಅನುಮಾನಾಸ್ಪದ ಸಾವು !

Share with

ಕಾಸರಗೋಡು: ಜಿಲ್ಲಾ ನೋಂದಣಾಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮಲಪ್ಪುರಂ ನಿವಾಸಿ ಟಿ. ಇ ಮುಹಮ್ಮದ್ ಅಶ್ರಫ್ (55 ವ) ಮೃತಪಟ್ಟ ಜಿಲ್ಲಾ ನೋಂದಣಾಧಿಕಾರಿ.

ಕಾಸರಗೋಡು ಜಿಲ್ಲಾ ನೋಂದಣಿ ಅಧಿಕಾರಿಯಾಗಿದ್ದ ಇವರು ನಗರ ಹೊರವಲಯದ ಹೊಟೇಲೊಂದರಲ್ಲಿ ಜು.19 ರಂದು ರೂಂ ಪಡೆದು ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ ಅಶ್ರಫ್ ರವರು ರೂಂ ನಿಂದ ಹೊರಬರದೆ, ಮೊಬೈಲ್ ಕರೆಯನ್ನೂ ಸ್ವೀಕರಿಸದೆ ಇದ್ದುದರಿಂದ ಸಂಶಯಗೊಂಡು ಬಾಗಿಲು ತೆರೆದು ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ಧೃಡೀಕರಿಸಿದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ .


Share with

Leave a Reply

Your email address will not be published. Required fields are marked *