ರಸ್ತೆ ತಡೆ , ಬಂದ್ ಮಾಡುವುದನ್ನು ಬಿಟ್ಟು ನ್ಯಾಯೋಚಿತ ಹೋರಾಟ ಮಾಡಬೇಕಿದೆ: ಶಾಸಕ ಅಶೋಕ್ ರೈ
![](https://i0.wp.com/veekshakavani.com/wp-content/uploads/2023/08/New-Project-5.jpg?resize=640%2C400&ssl=1)
ಪುತ್ತೂರು: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಪರ ಇರುವ ಯಾವುದೇ ಹೋರಾಟಕ್ಕೂ ನನ್ನ ಪೂರ್ಣ ಬೆಂಬಲ ಇದೆ, ಸೌಜನ್ಯಾ ಸಾವಿಗೆ ನ್ಯಾಯ ಸಿಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಅದಕ್ಕಾಗಿ ನಾವೆಲ್ಲರೂ ನ್ಯಾಯೋಚಿತ ಹೋರಾಟವನ್ನು ಮಾಡಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ರಸ್ತೆ ತಡೆ ಅಥವಾ ಬಂದ್ ಮಾಡಿ ಜನರಿಗೆ ತೊಂದರೆ ಕೊಡುವುದು ಸರಿಯಾದ ಕ್ರಮವಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡಲು ಅನೇಕ ದಾರಿಗಳಿವೆ, ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಇದೆ. ಕೃತ್ಯವನ್ನು ಯಾರೂ ಬೆಂಬಲಿಸುವುದಿಲ್ಲ. ಸೌಜನ್ಯಾ ಸಾವಿಗೆ ನ್ಯಾಯ ಸಿಗಬೇಕೆಂಬುದೇ ಎಲ್ಲರ ಆಶಯವಾಗಿದೆ. ಜನರಿಗೆ ತೊಂದರೆ ನೀಡಿ ಯಾವುದೇ ಪ್ರತಿಭಟನೆ ಅಥವಾ ಹೋರಾಟ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಶಾಸಕರು ತಿಳಿಸಿದ್ದಾರೆ.