
ಸಕಲೇಶಪುರ: ಇಂದು ನಡೆದ ಆಪರೇಷನ್ ಸಿಂಧೂರ ತಿರಂಗ ಯಾತ್ರೆ ಶುಕ್ರವಾರ ಯಶಸ್ವಿಯಾಗಿ ನಡೆಯಿತು.
ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ತಕ್ಕ ಉತ್ತರ ಕೊಟ್ಟ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿದ ತಿರಂಗ ಯಾತ್ರೆ ಇಂದು ಪಟ್ಟಣದ ಹೇಮಾವತಿ ಪ್ರತಿಮೆಯ ಮುಂಭಾಗದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಂದು ಕಿಲೋಮೀಟರ್ ಉದ್ದದ ತಿರಂಗ ಬಾವುಟವನ್ನು ಮಾಜಿ ಸೈನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು ಮಠಾಧೀಶರು, ಶಾಸಕರು ಹಾಗೂ ಸಾರ್ವಜನಿಕರು ತಿರಂಗ ಬಾವುಟವನ್ನು ಹಿಡಿದು ಮೆರವಣಿಗೆ ನಡೆಸಿದರು.





