ಟೆಂಪೋ ರಿಕ್ಷಾ ಚಾಲಕನ ಓವರ್ ಟೇಕ್: ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Share with

ಟೆಂಪೋ ರಿಕ್ಷಾ ಚಾಲಕನನ್ನು ಬಚಾವ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಗುದ್ದಿದ ಬಸ್‌.

ಬಂಟ್ವಾಳ: ಟೆಂಪೋ ರಿಕ್ಷಾ ಚಾಲಕನೋರ್ವ ಆಕ್ಟಿವಾ ಗಾಡಿಯನ್ನು ಓವರ್ ಟೇಕ್ ಮಾಡಲು ಹೋಗಿದ್ದ ಸಂದರ್ಭದಲ್ಲಿ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡಿನಿಂದ ಬಿ.ಸಿ ರೋಡ್ ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಟೆಂಪೋವನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಂದೂರಿನಲ್ಲಿ ನಡೆದಿದೆ.

ಟೆಂಪೋ ರಿಕ್ಷಾ ಚಾಲಕ ಇಲ್ಯಾಸ್ ಮೀನಿನ ವ್ಯಾಪಾರಿಯಾಗಿದ್ದು, ಮೆಲ್ಕಾರಿನಿಂದ ಬರುತ್ತಿದ್ದ ವೇಳೆ ಕಂದೂರಿನಲ್ಲಿ ಆಕ್ಟಿವಾ ಒಂದನ್ನು ಓವರ್ ಟೇಕ್ ಮಾಡಲು ಹೋಗುವಾಗ ಕಾಸರಗೋಡಿನಿಂದ ಬಿ.ಸಿ ರೋಡಿಗೆ ಬರುತ್ತಿದ್ದ ಸರಕಾರಿ ಬಸ್‌ ಎದುರಾಗಿದ್ದು, ಈ ವೇಳೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಟೆಂಪೋ ರಿಕ್ಷಾ ಚಾಲಕನನ್ನು ಬಚಾವ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಗುದ್ದಿದ್ದಾರೆ.

ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಮೆಸ್ಕಾಮ್ ಸಿಬ್ಬಂದಿಗಳು ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಿದ್ದಾರೆ. ಇನ್ನು ಬಸ್‌ ಚಾಲಕ ಸಮಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೆಸ್ಕಾಮ್ ಸಿಬ್ಬಂದಿಗಳು ಕರೆಂಟ್ ಕಂಬವನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಬಂದ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *