‘ಮೋಂಥಾ’ ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ಪ್ರಕಾಶಂ, ನೆಲ್ಲೂರು, ತಿರುಪತಿ, ಚಿತ್ತೂರು, ಅನ್ನಮಯ, ಅನಂತಪುರ, ಕರ್ನೂಲ್, ನಂದ್ಯಾಲ್ ಮತ್ತು ವೈಎಸ್ಆರ್ ಕಡಪ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ದಿಢೀರ್ ಪ್ರವಾಹದ ಅಪಾಯವಿದೆ ಎಂದು ಹೇಳಲಾಗಿದೆ. ಚಂಡಮಾರುತವು ಪ್ರಸ್ತುತ ಚೆನ್ನೈನಿಂದ 480 ಕಿ.ಮೀ, ಕಾಕಿನಾಡದಿಂದ 530 ಕಿ.ಮೀ ಮತ್ತು ವಿಶಾಖಪಟ್ಟಣದಿಂದ 560 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಅದು ವಿವರಿಸಿದೆ.





