ವೇಗದಿಂದ ಬಂದ ಬಸ್‌ ಬೈಕ್‌ಗೆ ಡಿಕ್ಕಿ: ಸವಾರರಿಬ್ಬರು ಗಂಭೀರ

Share with

ಮಂಗಳೂರು: ವೇಗದಿಂದ ಬಂದ ಎಕ್ಸ್‌ಪ್ರೆಸ್ ಬಸ್‌ ರಸ್ತೆ ದಾಟಲು ನಿಂತ ಬೈಕ್‌ಗೆ ಡಿಕ್ಕಿ ಹೊಡೆದು ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹೊಸಬೆಟ್ಟು ಎಂಬಲ್ಲಿ ನಡೆದಿದೆ.

ಬೈಕ್‌ ಸವಾರರಿಬ್ಬರು ಹಳೆಯಂಗಡಿ ಇಂದಿರಾ ನಗರ ನಿವಾಸಿ ಮುಹಮ್ಮದ್‌ ಸಾಹಿಲ್‌ ಹಾಗೂ ಪಕ್ಷಿಕೆರೆ ಹೊಸಕಾಡು ನಿವಾಸಿ ಅರಾಫತ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ನಗರದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ತೀವ್ರತೆಯ ವೀಡಿಯೋ ವೈರಲ್‌ ಆಗಿದೆ.

ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಎಂಬಲ್ಲಿ ವೇಗದಿಂದ ಬಂದ ಬಸ್‌ ರಸ್ತೆ ದಾಟಲು ನಿಂತ ಬೈಕ್‌ಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ಸಂಚಾರಿಸಿ ನಿಂತಿದೆ.

ಈ ಬಗ್ಗೆ ಉತ್ತರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *