ಬಂಟ್ವಾಳ: ನರೇಂದ್ರ ಮೋದಿಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೇವಾಪಾಕ್ಷಿಕದ ಅಂಗವಾಗಿ ಪೊಳಲಿ ಶ್ರೀರಾಮಕೃಷ್ಣ ತಪೋವನದಲ್ಲಿ ಆಶ್ರಮದಲ್ಲಿರುವ ಮಕ್ಕಳೊಂದಿಗೆ ಸಹ ಭೋಜನ ಕಾರ್ಯಕ್ರಮ ನಡೆಸಲಾಯಿತು.
![](https://i0.wp.com/veekshakavani.com/wp-content/uploads/2023/09/WhatsApp-Image-2023-09-17-at-8.30.22-PM-1.jpg?resize=640%2C400&ssl=1)
ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ತಪೋವನದ ಸ್ವಾಮೀಜಿಯವರಾದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಶಾಸಕರಾದ ಶ್ರೀ ರಾಜೇಶ್ ನಾಯ್ಕ್, ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರರಾದ ಶ್ರೀ ವಿಕಾಸ್ ಪುತ್ತೂರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊoಬಯ್ಯ ಅರಳ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಮತಿ ಜಯಶ್ರೀ ಕರ್ಕೇರ, ಪ್ರಮುಖರಾದ ಚಂದ್ರಾವತಿ ಪೊಳಲಿ, ವೆಂಕಟೇಶ್ ನಾವಡ ಪೊಳಲಿ, ಸುಕೇಶ್ ಚೌಟ, ಸೋಮಶೇಖರ್ ಅಮ್ಮುoಜೆ, ಯಶವಂತ ಪೊಳಲಿ, ರಾದಕೃಷ್ಣ ತಂತ್ರಿ, ಕಿಶೋರ್ ಪಲ್ಲಿಪಾಡಿ, ಅಶ್ವಥ್ ಬಾಳಿಕೆ, ಕಾರ್ತಿಕ್ ಬಲ್ಲಾಳ್, ಲೋಕೇಶ್ ಪಲ್ಲಿಪಾಡಿ, ಚಂದ್ರಶೇಖರ ಪಲ್ಲಿಪಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.