ಉಡುಪಿ: ಭೀಮಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಉಡುಪಿ ಶಿರೂರು ಮಠಕ್ಕೆ ಟೆಂಪೋ ಟ್ರಾವೆಲ್ಲರ್ ಹಸ್ತಾಂತರಿಸಲಾಯಿತು.
ಉಡುಪಿ ಶಿರೂರು ಮಠದ ವೇದಾವರ್ಧನತೀರ್ಥ ಶ್ರೀಪಾದರಿಗೆ ಭೀಮಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ವಿಷ್ಣು ಶರಣ್ ಭಟ್ ಅವರು ಉಡುಪಿ ಶಿರೂರು ಮಠದಲ್ಲಿ ಟೆಂಪೊ ಟ್ರಾವೆಲ್ಲರ್ ಹಸ್ತಾಂತರ ಮಾಡಿದರು.
ಶಿರೂರು ಶ್ರೀಗಳಿಗೆ ಮುಂದಿನ ಪರ್ಯಾಯ 2026-28 ಪೂರ್ವಭಾವಿಯಾಗಿ ದೇಶ ಸಂಚಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರಳಲು ಅನುಕೂಲವಾಗುವಂತೆ ವಿಶೇಷವಾದ ಫೋರ್ಸ್ ಟೆಂಪೋ ಟ್ರಾವೆಲ್ಲರ್ ವಾಹನವನ್ನು ಭೀಮಾ ಗೋಲ್ಡ್ ಕೊಡುಗೆಯಾಗಿ ನೀಡಿದೆ.
ಬಳಿಕ ಮಾತನಾಡಿದ ಶಿರೂರು ಮಠದ ವೇದಾವರ್ಧನತೀರ್ಥ ಶ್ರೀಪಾದರು, ಭೀಮಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಗೆ ಶುಭ ಹಾರೈಸಿದರು.
ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಶ್ರೀಶ ಭಟ್ ಕಡೆಕಾರು ಹಾಗೂ ಭೀಮಾ ಸಂಸ್ಥೆಯ ಕ್ಲಸ್ಟರ್ ಹೆಡ್ ಕಾರ್ತಿಕ್ ರಾವ್, ಸೇಲ್ಸ್ ಆಪರೇಷನ್ ನ ಗುರುಪ್ರಸಾದ್ ರಾವ್ ಮೊದಲಾದವರು ಉಪಸ್ಥಿತರಿದ್ದರು.