![ವಿಶ್ವಹಿಂದೂಪರಿಷದ್ ಭಜರಂಗದಳ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ನಡೆಯಿತು.](https://i0.wp.com/veekshakavani.com/wp-content/uploads/2023/09/ಕೆಸರ್ಡ್-ಒಂಜಿ-ದಿನ-ಕಾರ್ಯಕ್ರಮ.jpg?resize=640%2C400&ssl=1)
ವಿಶ್ವಹಿಂದೂಪರಿಷದ್ ಭಜರಂಗದಳ ಮಾತೃ ಮಂಡಳಿ ದುರ್ಗಾವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಮ್ದೇಲ್ ಘಟಕದ ವತಿಯಿಂದ ಆಯೋಜಿಸಲ್ಪಟ್ಟ ಕೆಸರ್ಡ್ ಒಂಜಿ ದಿನ ಎಂಬ ಕಾರ್ಯಕ್ರಮ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ದೇಲ್ ಮುಂದಾಳತ್ವದಲ್ಲಿ ಕಡೆಗೋಳಿ ನಾಣ್ಯ ಗದ್ದೆಯಲ್ಲಿ ನಡೆಯಿತು.
![ಪುತ್ತೂರು ಜಿಲ್ಲಾ ಉಪಾಧ್ಯಕ್ಷರು ಗುರುರಾಜ್ ಬಂಟ್ವಾಳ, ಬಂಟ್ವಾಳ ಪ್ರಖಂಡ ಅಧ್ಯಕ್ಷರು ಪ್ರಸಾದ್ ಕುಮಾರ್ ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.](https://i0.wp.com/veekshakavani.com/wp-content/uploads/2023/09/ಕಾರ್ಯಕ್ರಮ-ಉದ್ಘಾಟನೆ-1.jpg?resize=640%2C400&ssl=1)
ಪುತ್ತೂರು ಜಿಲ್ಲಾ ಉಪಾಧ್ಯಕ್ಷರು ಗುರುರಾಜ್ ಬಂಟ್ವಾಳ, ಬಂಟ್ವಾಳ ಪ್ರಖಂಡ ಅಧ್ಯಕ್ಷರು ಪ್ರಸಾದ್ ಕುಮಾರ್ ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
![ಪಂದ್ಯಾಟದಲ್ಲಿ ವಿಜೇತರಾದ ಸುಮಾರು 200 ಜನರಿಗೆ ಭಗವದ್ಗೀತೆ ಹಾಗೂ ಮಹಾಭಾರತ ಗ್ರಂಥಗಳನ್ನು ನೀಡಲಾಯಿತು.](https://i0.wp.com/veekshakavani.com/wp-content/uploads/2023/09/ಪಂದ್ಯಾಟದಲ್ಲಿ-ವಿಜೇತರಾ.jpg?resize=640%2C400&ssl=1)
![ವಿಜೇತರಾದ ಸುಮಾರು 200 ಜನರಿಗೆ ಭಗವದ್ಗೀತೆ ಹಾಗೂ ಮಹಾಭಾರತ ಗ್ರಂಥಗಳನ್ನು ನೀಡಲಾಯಿತು.](https://i0.wp.com/veekshakavani.com/wp-content/uploads/2023/09/ವಿಜೇತರು.jpg?resize=640%2C400&ssl=1)
ಕಳೆದ ವರ್ಷ 250 ಮನೆಗಳಿಗೆ ಭಾರತ ಮಾತೆ ಭಾವಚಿತ್ರ ವನ್ನು ಸುಮಾರು 250 ಮನೆಗಳಿಗೆ ನೀಡಲಾಗಿತ್ತು. ಈ ಸಲ ವಿಶಿಷ್ಟ ಕಾರ್ಯಕ್ರಮದಂತೆ ಹಿಂದೂ ಧಾರ್ಮಿಕ ಆಚಾರ ವಿಚಾರ ಧರ್ಮ ಶಿಕ್ಷಣ ನೀಡುವ ಸಲುವಾಗಿ ಪಂದ್ಯಾಟದಲ್ಲಿ ವಿಜೇತರಾದ ಸುಮಾರು 200 ಜನರಿಗೆ ಭಗವದ್ಗೀತೆ ಹಾಗೂ ಮಹಾಭಾರತ ಗ್ರಂಥಗಳನ್ನು ನೀಡಲಾಯಿತು. ಊರಿನ ಗಣ್ಯರು ಬಾಗವಹಿಸಿದರು.