ಉಪ್ಪಳ: ಲೋಕಸಭಾ ಚುವಾಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿಯವರ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದೆ.
![ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿಯವರ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದೆ.](https://i0.wp.com/veekshakavani.com/wp-content/uploads/2024/03/ಎಂ.ಎಲ್-ಅಶ್ವಿನಿಯವರ-ಪ್ರಚಾರ-ಕಾರ್ಯ.jpg?resize=640%2C400&ssl=1)
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಪೈವಳಿಕೆ , ಕುಂಬಳೆ ಕಾಲೇಜು, ಪೆರ್ನೆ ಮುಚ್ಚಿಲೋಟ್ ಶ್ರೀ ಭಗವತಿ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಸಹಿತ ಹಲವು ಕ್ಷೇತ್ರ, ಸಮಾರಂಭಗಳಿಗೆ ಬಿಜೆಪಿ ಅಭ್ಯರ್ಥಿ ಭೇಟಿ ಮತಯಾಚಿಸಿದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್.ಬಿ.ಎಂ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮುಖಂಡರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ವಿ.ರವೀಂದ್ರನ್, ಚಂದ್ರಾವತಿ ಶೆಟ್ಟಿ, ಸದಾಶಿವ ಚೇರಾಲ್ ಮೊದಲಾದವರು ಜೊತೆಗಿದ್ದರು.