ಉದ್ಯಾವರ ಶ್ರೀ ಅರಸು ಮಂಜೀಷ್ಮಾರ್ ದೈವಗಳ ಕ್ಷೇತ್ರದ ನೂತನ ಪ್ರಧಾನ ಮಹಾದ್ವಾರದ ಲೋಕಾರ್ಪಣೆ, ಕಾಣಿಕೆ ಡಬ್ಬಿ ಮತ್ತು ನೂತನ ಕಚೇರಿಯ ಉದ್ಘಾಟನೆ

Share with

ಮಂಜೇಶ್ವರ: ಉದ್ಯಾವರ ಶ್ರೀ ಅರಸು ಮಂಜೀಷ್ಠಾರ್ ದೈವಗಳ ಕ್ಷೇತ್ರದಲ್ಲಿ ಸುಮಾರು 11 ಲಕ್ಷ ರೂಪಾಯಿ ಮೊತ್ತದಲ್ಲಿ ನೂತನವಾಗಿ ನಿರ್ಮಿಸಿದ ಪ್ರಧಾನ ಮಹಾದ್ವಾರದ ಉದ್ಘಾಟನೆ ಹಾಗೂ ಕಾಣಿಕೆ ಡಬ್ಬಿ ಮತ್ತು ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ತಂತ್ರಿಗಳಾದ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ದೀಪ ಬೆಳಗಿಸಿದರು. ಕೇರಳ ಮಲಬಾ‌ರ್ ದೇವಸ್ವಂ ಮ೦ಡಳಿಯ ಆಯುಕ್ತರಾದ ಟಿ.ಸಿ. ಬಿಜು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಕ್ಷೇತ್ರದ ಅರ್ಚಕರು, ಆಚಾರ ಪಟ್ಟವರು, ಗುರಿಕಾರರು ಮತ್ತು ಹತ್ತು ಸಮಸ್ತರು ಉಪಸ್ಥಿತರಿದ್ದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಕ್ಷೇತ್ರದ ಆಡಳಿತ ಮೊಕೇಸರರಾದ ಕಿರಣ್ ಕುಮಾರ್ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಸರಗೋಡು ವಿಭಾಗ ಮಲಬಾ‌ರ್ ದೇವಸ್ವಂ ಮಂಡಳಿಯ ಸಹಾಯಕ ಆಯುಕ್ತರಾದ ಕೆ.ಪಿ. ಪ್ರದೀಪ್ ಕುಮಾರ್, ಮಹಾಧ್ವಾರದ ದಾನಿಗಳಾದ: ಕೇಶವ ಶಂಕರ ಆಳ್ವ ಕೊಳಕೆಗುತ್ತು, ಪುತ್ರರಾದ: ಮೋಹಿತ್ ಕೇಶವ್ ಆಳ್ವ ಸಂಬಂಧಿಕರಾದ ವಿಠಲ್ ಆಳ್ವ ಸಂಕಪ್ಪ ಆಳ್ವ ಆಡಳಿತ ಮಂಡಳಿ ಸದಸ್ಯರಾದ: ಯೋಗೀಶ್ ಕುಂಜತ್ತೂರು, ಸದಾಶಿವ ಶೆಟ್ಟಿ ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು.

ಈ ವೇಳೆ ಮಹಾದ್ವಾರದ ಸೇವಾಕರ್ತೃ, ದ್ವಾರ ನಿರ್ಮಾಣದಲ್ಲಿ ತೊಡಗಿಸಿದವರನ್ನ ವಿವಿಧ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕ್ಷೇತ್ರ ಕಾರ್ಯನಿರ್ವಹಣಾ ಅಧಿಕಾರಿ: ಕೆ.ಪಿ. ಸುನಿಲ್‌ ಕುಮಾ‌ರ್ ಸ್ವಾಗತಿಸಿ, ಉತ್ಸವ ಸಮಿತಿ ಅಧ್ಯಕ್ಷ: ಹರೀಶ್‌ ಶೆಟ್ಟಿ ಮಾಡ ನಿರೂಪಿಸಿ, ಆಡಳಿತ ಮಂಡಳಿ ಸದಸ್ಯರಾದ: ದಯಾಕರ ಮಾಡ ವಂದಿಸಿದರು.


Share with

Leave a Reply

Your email address will not be published. Required fields are marked *