ಸೀತಾಂಗೋಳಿ: ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿದೆ. ಮಾ.1ರಿಂದ ಕಳಿಯಾಟ ಮಹೋತ್ಸವ ಆರಂಭಗೊಂಡಿತ್ತು. ಏಳುದಿನಗಳಲ್ಲಿ ಪುಲ್ಲೂರು ಕಣ್ಣನ್ ದೈವ, ಕಣ್ಣಂಗಾಟ್ ಭಗವತಿ, ಪುಲ್ಲೂರು ಕಾಳಿ ದೈವ, ಶ್ರೀ ವಿಷ್ಣುಮೂರ್ತಿ, ಶ್ರೀ ಬೀರ್ಣಾಳ – ಮೊದಲಾದ ದೈವಗಳ ನರ್ತನ ನಡೆಯಿತು.
![](https://i0.wp.com/veekshakavani.com/wp-content/uploads/2024/03/Screenshot_20240308-212809_WhatsApp.jpg?resize=729%2C1024&ssl=1)
ಕೊನೆಯ ದಿನವಾದ ನಿನ್ನೆ(ಮಾ.7) ನರಂಬಿಲ್ ಭಗವತಿ ದೈವದ ನರ್ತನ, ಪುಲ್ಲೂರ್ಕಾಳಿ ದೈವದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿಸೇವೆ, ಶ್ರೀ ಮುಚ್ಚಿಲೋಡ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್ಕಾಳಿ ದೈವದೊಂದಿಗೆ ಭೇಟಿ ಬಳಿಕ ಪ್ರಸಾದ ವಿತರಣೆಯಾಯಿತು.
![](https://i0.wp.com/veekshakavani.com/wp-content/uploads/2024/03/kasargod_dd_1709725189891_1709725214928.webp?resize=400%2C225&ssl=1)
ಕಾಸರಗೋಡು, ದಕ್ಷಿಣಕನ್ನಡ, ಉಡುಪಿ, ಕೊಡಗು ಸಹಿತ ವಿವಿಧ ಜಿಲ್ಲೆಗಳ ವಾಣಿಯ-ಗಾಣಿಗ ಸಮಾಜ ಬಾಂಧವರು, ಕೇರಳ, ಕರ್ನಾಟಕದ ಹಲವರು ಜನಪ್ರತಿನಿಧಿಗಳು ಸಹಿತ ಸಹಸ್ರಾರು ಮಂದಿ ಕ್ಷೇತ್ರಕ್ಕಾಗಮಿಸಿ ದೈವಗಳ ದರ್ಶನ ಪಡೆದರು.
![](https://i0.wp.com/veekshakavani.com/wp-content/uploads/2024/03/kasargod_kkdddd_1709725191961_1709725239850.webp?resize=400%2C225&ssl=1)
![](https://i0.wp.com/veekshakavani.com/wp-content/uploads/2024/03/Picsart_24-03-08_21-47-49-661.jpg?resize=683%2C1024&ssl=1)
![](https://i0.wp.com/veekshakavani.com/wp-content/uploads/2024/03/Picsart_24-03-08_21-45-36-458.jpg?resize=683%2C1024&ssl=1)