ಲಾಲ್‌ಭಾಗ್-ಕುರುಡಪದವ್ ರಸ್ತೆ ಶೋಚನೀಯವಸ್ಥೆಯನ್ನು  ದುರಸ್ಥಿಗೊಳೀಸಲು ಆಗ್ರಹಿಸಿ ಸಾರ್ವಜನಿಕರಿಂದ ಮಂಜೇಶ್ವರ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೃಹತ್ ಪ್ರತಿಭಟನೆ

Share with


ಪೈವಳಿಕೆ: ಪೈವಳಿಕೆ ಪಂಚಾಯತ್‌ನ ಲಾಲ್‌ಭಾಗ್ ಕುರುಡಪದವು ಲೋಕೋಪಯೋಗಿ ಇಲಾಖೆಯ ರಸ್ತೆ ಕಳೆದ ಹಲವು ವರ್ಷಗಳಿಂದ ಹದಗೆಟ್ಟು ಶೋಚನೀಯವಸ್ಥೆಗೊಂಡು ವಾಹನ ಸಂಚಾರಕ್ಕೆ  ತೀರಾ ಸಂಕಷ್ಟ ಉಂಟಾಗುತ್ತಿದ್ದು, ಅಧಿಕಾರಿಗಳು ದುರಸ್ಥಿಕಾರ್ಯಗೊಳಸಲು  ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಟ್ಟಾಗಿ  ಮಂಜೇಶ್ವರ ಲೋಕೋಪಯೋಗಿ ಇಲಾಖೆ  ಕಚೇರಿ ಮುಂದೆ  ಬೃಹತ್ ಪ್ರತಿಭಟನೆಯನ್ನು ನಡೆಸಿ ಅಧಿಕಾರಿಗಳಿಗೆ ಮನವಿಯನ್ನು  ನೀಡಲಾಯಿತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು   ಹೊಂಡ ಗುಂಡಿಗಳಿಗೆ ಜಲ್ಲಿ ಹುಡಿಯನ್ನು ಹಾಕಿ ತಾತ್ಕಾಲಿಕವಾಗಿ ದುರಸ್ಥಿ ಮಾಡುವುದಾಗಿಯೂ,  ಶೀಘ್ರದಲ್ಲೇ  ರಸ್ತೆ ಅಭಿವೃದ್ದಿಯ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ.  ಪ್ರತಿಭಟನೆಯಲ್ಲಿ ವಿಶೇಷವಾಗಿ ಈ ರೂಟಿನಲ್ಲಿ ಸಂಚರಿಸುವ ಬಸ್‌ಗಳು, ವಿವಿಧ ವಾಹನಗಳ ಸಂಚಾರವನ್ನು ಸ್ವಯಂಪ್ರೇರಿತವಾಗಿ ಮೊಟಕುಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅಲ್ಲದೆ ಊರ ವಿವಿಧ ಕ್ಲಬ್‌ಗಳು, ಊರವರು, ವಿವಿಧ ಪಕ್ಷದ ನೇತಾರರು, ಈಗೆ ನೂರಾರು ಮಂದಿ ಪಾಲ್ಗೊಂಡರು


Share with

Leave a Reply

Your email address will not be published. Required fields are marked *