ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆ ನನ್ನ ಫೊಟೊ ಬರುವ ಹಾಗೆ ಮಾಡ್ರಯ್ಯ: ಡಿಕೆಶಿ

Share with

ಬೆಂಗಳೂರು: ಕರ್ನಾಟಕ ಓನ್ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿದ್ದಾರೆ.  ಕನಕಪುರದ ಎಸ್.ಎಲ್ ವಿ ರಸ್ತೆಯ ಕರ್ನಾಟಕ ಒನ್ ಕೇಂದ್ರ ಪರಿಶೀಲನೆ ಮಾಡಿ, ಗೃಹಲಕ್ಷ್ಮೀ ಅರ್ಜಿ ನೊಂದಣಿ ವೀಕ್ಷಣೆ ಮಾಡಿದರು. ಈ ವೇಳೆ  ಮಹಿಳೆಯರಿಗೆ ಶುಭಕೋರಿ ನೋಂದಣಿ ಪತ್ರ ವಿತರಿಸಿದರು. ಇದೇ ವೇಳೆ ನನ್ನ, ಸಿದ್ದರಾಮಯ್ಯ ಫೋಟೋ ಜೊತೆಯಲ್ಲಿ ಬರುವ ಹಾಗೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು. ಇದರ ಜತೆಗೆ ಅರ್ಜಿ ಸಲ್ಲಿಸಲು ಬಂದವರ ಜೊತೆಗೆ ಉಭಯ ಕುಶಲೋಪರಿ ವಿಚಾರಿಸಿದರು. 


Share with

Leave a Reply

Your email address will not be published. Required fields are marked *