ಸುಳ್ಯದಲ್ಲಿ ಸರಣಿ ಅಪಘಾತ!

Share with

ಸುಳ್ಯ: ಜೀಪು ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ ಮಾಣಿ ಮೈಸೂರು ಹೆದ್ದಾರಿಯ
ಸುಳ್ಯ ನಗರದ ಜ್ಯೋತಿ ಸರ್ಕಲ್ ಬಳಿ ಆ.2 ರಂದು ಸಂಜೆ ನಡೆದಿದೆ.

ಇನೋವಾದವರು ಬೆಂಗಳೂರು ಮೂಲದವರಾಗಿದ್ದು ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು ಎಂದು ತಿಳಿದಿದೆ . ಟ್ರೈಬರ್ ಕಾರಿನವರು ಕುಪ್ಪೆಟ್ಟು ಮೂಲದವರಾಗಿದ್ದು ಉಪ್ಪಿನಂಗಡಿಯಿಂದ ಊರಿಗೆ ತೆರಳುತ್ತಿದ್ದರು.

ಜೀಪು ಚಾಲಕನು ಕೊಡ್ತುಗುಳಿ ಮುರಳೀಧರರವರ ಮಗ ಪೃಥ್ವಿಶ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಎರಡು ಕಾರು, ಒಂದು ಜೀಪು ಜಖಂ ಗೊಂಡಿದ್ದು, ಘಟನಾ ಸ್ಥಳಕ್ಕೆ ಸುಳ್ಯ ನಗರದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜೀಪು ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *