![ವಾರ್ಷಿಕ-ವಿಷು-ಜಾತ್ರಾಮಹೋತ್ಸವದ-ಆಮಂತ್ರಣ-ಪತ್ರಿಕೆ](https://i0.wp.com/veekshakavani.com/wp-content/uploads/2024/03/ವಾರ್ಷಿಕ-ವಿಷು-ಜಾತ್ರಾಮಹೋತ್ಸವದ-ಆಮಂತ್ರಣ-ಪತ್ರಿಕೆ.jpg?resize=390%2C291&ssl=1)
ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಟಾ ದಿನಾಚರಣೆ ಹಾಗೂ ವಿಷು ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಾ.6ರಂದು ಸಂಜೆ 5.30ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಧಾರ್ಮಿಕ ಮುಖಂಡರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಶಂಕರ ರೈ ಮಾಸ್ತರ್, ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರರು ನ್ಯಾಯವಾದಿ ಸುಬ್ಬಯ್ಯ ರೈ ಮೊದಲಾದವರು ಭಾಗವಹಿಸುವರು.