ಸೇವಾಭಾರತಿ ಕಲಾವೃಂದ ಭಜನ ಮಂದಿರ (ರಿ) ಬೇಕೂರು ಇವರ ವತಿಯಿಂದ 80ನೆ ಸ್ವಾತಂತ್ರ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷರಾದ ಕುಂಞರಾಮ ಕಾನ ಹಾಗೂ ಹಿರಿಯರಾದ ನಾರಾಯಣ ಕಾನ ಇವರು ಸಂಘದ ಅಧ್ಯಕ್ಷರಾದ ರಾಜೇಶ್ ಕಾನ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಧ್ವಜಾರೋಹಣ ನಡೆಸಿದರು.ಸಂಘದ ಸದಸ್ಯರಾದ ಮಾಧವ ಆಚಾರ್ಯಾರವರು ಸ್ವಾತಂತ್ರಕ್ಕಾಗಿ ಹೋರಾಟ ಹಾಗೂ ಬಲಿದಾನ ಮತ್ತು ದೇಶಪ್ರೇಮದ ಕುರಿತು ಮಾತನಾಡಿದರು. ಕೊನೆಗೆ ರಾಷ್ಟ್ರಗೀತೆ ಹಾಡಿ ಸಿಹಿ ತಿಂಡಿ ವಿತರಿಸಲಾಯಿತು.





