ವ್ಯಾಪಕಗೊಂಡ ಕಡಲ್ಕೊರೆತ ಮೂಸೋಡಿಯಲ್ಲಿ ಒಂದು ಮನೆ ಸಹಿತ ಹಲವು ತೆಂಗಿನ ಮರಗಳು ಸಮುದ್ರ ಪಾಲು: ಐದು ಕುಟುಂಬಗಳ ಸ್ಥಳಾಂತರ

Share with

ಉಪ್ಪಳ: ಉಪ್ಪಳ ಪರಿಸರ ಪ್ರದೇಶದಲ್ಲಿ ಕಡಲ್ಕೊರೆತ ವ್ಯಾಪಗೊಂಡಿದ್ದು, ಕರಾವಳಿ ಪ್ರದೇಶದ ನಿವಾಸಿಗಳು ಆತಂಕಗೊoಡಿರುವoತೆ ಮಂಗಲ್ಪಾಡಿ ಪಂಚಾಯತ್‌ನ ೧ನೇ ವಾರ್ಡ್ ಮೂಸೋಡಿಯಲ್ಲಿ  ಕೂಲಿ ಕಾರ್ಮಿಕರಾದ ಮೂಸಾ ಎಂಬವರ ಮನೆ  ಕಳೆದ ಹಲವು ದಿನಗಳ ಹಿಂದೆ ಸಮುದ್ರ ಪಾಲಾಗಿರುವಂತೆ  ಇದೇ ಪರಿಸರದ ಆಸಿಯಮ್ಮ, ತಾಹಿರ, ಅಲಿಕುಂಞ, ಮೊಹಮ್ಮದ್, ಇಸ್ಮಾಯಿಲ್ ಎಂಬವರ ಮನೆಗಳೂ  ಅಪಾಯದ ಅಂಚಿನಲ್ಲಿದ್ದು, ಕಡಲ್ಕೊರೆತ ಮುಂದುವರಿಯುತ್ತಿದ್ದು, ಹಲವಾರು ಫಲ ಕೊಡುವ ತೆಂಗಿನ ಮರಗಳು ನಾಶಗೊಂಡಿದೆ. ಇತ್ತೀಚೆಗೆ  ಸ್ಥಳಕ್ಕೆ ತಲುಪಿ ಪರಿಶೀಲಿಸಿದ  ವಿಲೇಜ್, ಫಿಶರೀಸ್ ಇಲಾಖೆ ಅಧಿಕಾರಿಗಳು ಅಪಾಯದಂಚಿನಲ್ಲಿರುವ ಕುಟುಂಬಕ್ಕೆ   ಸ್ಥಳಾಂತರಗೊಳ್ಳಲು ನೋಟೀಸ್ ನೀಡಲಾಗಿದೆ.ಇದರಂತೆ ಇವರು  ಸಂಬoಧಿಕರ ವನೆಯಲ್ಲಿ ವಾಸಿಸುತ್ತಿದ್ದಾರೆ. ಈ ಪರಿಸರ ಪ್ರದೇಶದ ಕೈರುನ್ನೀಸ, ಸೆಫಿಯ, ನೆಫೀಸ, ಕಮಲ, ಜಾನು ಎಂಬವರ ಭಾರೀ ಪ್ರಮಾಣದ ಭೂಮಿ, ತೆಂಗಿನ ಮರಗಳು ಸಮುದ್ರ ಪಾಲಾಗಿರುವುದಾಗಿ ತಿಳೀಸಿದ್ದಾರೆ. ಹಲವು ವರ್ಷಗಳಿದ ಕಡಲ್ಕೊರೆತದಿಂದ  ಉಪ್ಪಳ ಪರಿಸರ ಪ್ರಡೇಶದಲ್ಲಿ ಹಲವು ಮನೆಗಳು, ಸ್ಥಳವನ್ನು ನಾಶಪಡಿಸುತ್ತಲೇ ಇದ್ದು, ಬೆಸ್ತರ ಸಹಿತ ನೂರಾರು ಕುಟುಂಬಗಳು ಆತಂಕಗೊoಡಿದ್ದಾರೆ.ಶಾರದಾನಗರ, ಮಣಿಮುಂಡ, ಹನುಮಾನ್ ನಗರ, ಶಿವಾಜಿನಗರ ಸಹಿತ ಪರಿಸರದಲ್ಲಿಅಲೆಗಳ ಭೀತಿ ಉಂಟಾಗಿದ್ದು, ಆತಂಕದಿAದಲೇ ಜೀವನ ಸಾಗಿಸುತ್ತಿದ್ದಾರೆ.  ಸಮುದ್ರ ತೀರದ ಉದ್ದಕ್ಕೂ ವ್ಯವಸ್ಥಿತವಾದ ತಡೆಗೋಡೆ ನಿರ್ಮಿಸಲು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *