ಕರ್ನಾಟಕ ತಂಡಕ್ಕೆ ಕಮ್ ಬ್ಯಾಕ್ ಆದ K L ರಾಹುಲ್, ಪ್ರಸಿದ್ಧ್ ಕೃಷ್ಣ…

Share with

ಕೆ.ಎಲ್.ರಾಹುಲ್​ ಕರ್ನಾಟಕ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ವಿಜಯ್​ ಹಜಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟವಾಗಿದ್ದು, ಕೆ.ಎಲ್​ ರಾಹುಲ್​ ಸ್ಥಾನ ಪಡೆದುಕೊಂಡಿದ್ದಾರೆ.

6 ವರ್ಷಗಳ ಬಳಿಕ ವಿಜಯ್​ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಕೆ.ಎಲ್​ ರಾಹುಲ್​ ಸಜ್ಜಾಗಿದ್ದಾರೆ. 2019-20ರ ಟೂರ್ನಿಯಲ್ಲಿ ಕೊನೆಯ ಬಾರಿ ರಾಹುಲ್​ ವಿಜಯ್​ ಹಜಾರೆ ಟೂರ್ನಿಯಲ್ಲಿ ಆಡಿದ್ದರು. ಮಯಾಂಕ್​ ಅಗರ್​​ವಾಲ್​ ನಾಯಕನಾಗಿ ಮುಂದುವರೆದಿದ್ದು, ಕರುಣ್​ ನಾಯರ್​ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ತಂಡದಲ್ಲಿ ಕೆ.ಎಲ್​ ರಾಹುಲ್​, ಪ್ರಸಿದ್ಧ್​ ಕೃಷ್ಣ ಸೇರಿದಂತೆ ಒಟ್ಟು 16 ಆಟಗಾರರಿಗೆ ಸ್ಥಾನ ಕಲ್ಪಿಸಲಾಗಿದೆ. ದೇವದತ್​​ ಪಡಿಕ್ಕಲ್, ವೈಶಾಕ್​ ವಿಜಯ್​ಕುಮಾರ್​, ಅಭಿನವ್​ ಮನೋಹರ್​ ಸ್ಥಾನ ಪಡೆದ ಪ್ರಮುಖ ಆಟಗಾರರಾಗಿದ್ದಾರೆ.

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ಕ್ಯಾಪ್ಟನ್), ದೇವದತ್ ಪಡಿಕ್ಲ್, ಕರುಣ್ ನಾಯರ್ (ಉಪನಾಯಕ), ಆರ್​.ಸ್ಮರಣ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್, ಮನ್ವಂತ್ ಕುಮಾರ್, ಶ್ರೀಶಾ ಎಸ್​ ಆಚಾರ್, ಅಭಿಲಾಷ್ ಶೆಟ್ಟಿ, ಶರತ್ ಬಿಆರ್, ಹರ್ಷಿಲ್ ಧರ್ಮಣಿ, ಧ್ರುವ್ ಪ್ರಭಾಕರ್, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ 


Share with

Leave a Reply

Your email address will not be published. Required fields are marked *