ನೈಸರ್ಗಿಕ ಕೃಷಿಯ ರಾಷ್ಟ್ರೀಯ ಅಭಿಯಾನ ಯೋಜನೆ ಅನುಷ್ಠಾನ

Share with



ಸಕಲೇಶಪುರ: 2025-26ನೇ ಸಾಲಿನಿಂದ ಎರಡು  ವರ್ಷಗಳ ಕಾಲಾವಧಿಗೆ ಸಕಲೇಶಪುರ ತಾಲ್ಲೂಕಿನ 05 ಹೋಬಳಿಗಳಲ್ಲಿ, ಪ್ರತೀ ಹೋಬಳಿಯ 02 ಪಂಚಾಯಿತಿಗಳಲ್ಲಿ, ಪ್ರತೀ ಗ್ರಾಮ ಪಂಚಾಯಿತಿಯ 02 ಗ್ರಾಮಗಳಲ್ಲಿ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಅಭಿಯಾನ ಯೋಜನೆ*ಅನುಷ್ಠಾನಗೊಳ್ಳಲಿದೆ.


ಯೋಜನೆಯ ಉದ್ದೇಶ:
ವಿಷಮುಕ್ತ ಆಹಾರ ಉತ್ಪಾದನೆ, ನೈಸರ್ಗಿಕ ತತ್ವ ಬೇಸಾಯ ಪದ್ಧತಿಯಿಂದ ಕೃಷಿ ಚಟುವಟಿಕೆಗಳ ಖರ್ಚು ಕಡಿಮೆಗೊಳಿಸುವುದು, ಉತ್ಕೃಷ್ಟ ಕೃಷಿ ಉತ್ಪನ್ನಗಳಿಗೆ ವಿಶೇಷ ಮಾರುಕಟ್ಟೆ ಕಲ್ಪಿಸುವುದು, ನೈಸರ್ಗಿಕ ಕೃಷಿಯ ನಿರ್ವಹಣಾ ಘಟಕಗಳು ಮತ್ತು ಪೂರಕ ಪರಿಕರಗಳ ಉತ್ಪಾದನೆಗೆ ಹಾಗೂ ನೈಸರ್ಗಿಕ ಕೃಷಿ ತತ್ವಗಳ ರೈತರ ಅಳವಡಿಕೆಗೆ  ಉತ್ತೇಜಿಸುವುದು, ಅಗತ್ಯ ಸಾಮರ್ಥ್ಯ ಬಲವರ್ಧನೆ ಹೆಚ್ಚಿಸುವುದು.

ಯೋಜನೆಯಡಿ ಒಳಪಡುವ ಒಟ್ಟು 20 ಗ್ರಾಮಗಳಲ್ಲಿ, ಪ್ರತೀ ಗ್ರಾಮದಲ್ಲಿ ತಲಾ  25 ಸಾಮಾನ್ಯ ವರ್ಗದ ರೈತರು ಮತ್ತು 12 ಅಥವಾ 13 ಪರಿಶಿಷ್ಟ ಜಾತಿಯ ರೈತರು, ಮೂಗಲಿ ಗ್ರಾಮದ 02 ಪರಿಶಿಷ್ಟ ಪಂಗಡ ರೈತರನ್ನು ಫಲಾನುಭಗಳಾಗಿ ಪರಿಗಣಿಸಲು ಅವಕಾಶವಿರುವಂತೆ ಒಟ್ಟು 625 ರೈತರು ಯೋಜನೆಯ ಅನುಕೂಲ ಪಡೆಯಲಿದ್ದಾರೆ.

ಯಾರು ಫಲಾನುಭವಿಗಳಾಗಬಹುದು?:
ರೈತರ ಒಟ್ಟು ಹಿಡುವಳಿಯಲ್ಲಿ , ಕೃಷಿಯ ಅಥವಾ ತೋಟಗಾರಿಕೆಯ ಯಾವುದೇ ಬೆಳೆಗಳಲ್ಲಿ., ಸದ್ಯಕ್ಕೆ ಒಂದು ಎಕರೆ  ಪ್ರದೇಶದಲ್ಲಸ್ಟೇ, ರಾಸಾಯನಿಕ ಬಳಕೆಯನ್ನು ಶೂನ್ಯಗೊಳಿಸಿ, ನೈಸರ್ಗಿಕ ಕೃಷಿಯ ತತ್ವದ ಮೂಲಕ, ಮಣ್ಣಿನ ಪೋಷಕಾಂಶಗಳ ನಿರ್ವಹಣೆ,ಮಣ್ಣಿನ ಭೌತಿಕ,ರಾಸಾಯನಿಕ,ಜೈವಿಕ ನಿರ್ವಹಣೆ  ಬಗ್ಗೆ, ಬೆಳೆಗಳಲ್ಲಿ ಕೀಟ, ರೋಗ  ಮತ್ತು ಕಳೆ ನಿರ್ವಹಣಾ ಪದ್ಧತಿಗಳ ಬಗ್ಗೆ ತರಬೇತಿಯನ್ನು ಹೊಂದಿ, ಹಾಲಿ ಬೇಸಾಯ ಪದ್ಧತಿಯ ಒಟ್ಟು ಹೂಡಿಕೆ ವೆಚ್ಚವನ್ನು ಈ ಪರ್ಯಾಯ ನೈಸರ್ಗಿಕ ತತ್ವಗಳಿಂದ ತಗ್ಗಿಸಿ, ವಿಷಮುಕ್ತ ಆಹಾರ ಉತ್ಪಾದನೆಗೆ ಉತ್ತೇಜನೆ ನೀಡುವ  ಉದ್ದೇಶವನ್ನು ಇಚ್ಚಿಸಿ., ಇದರಂತೆ ನೈಸರ್ಗಿಕ ಕೃಷಿಯಲ್ಲಿ ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ  ಕೃಷಿ ಚಟುವಟಿಕೆ ನಿರ್ವಹಿಸಲು ಆಸಕ್ತಿ ಹೊಂದಿರುವ ರೈತರಿಗೆ ಆದ್ಯತೆ ನೀಡಲಾಗುವುದು.


ರೈತರ ನೋಂದಣಿ ಹೇಗೆ?
ಆಯಾ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಕೃಷಿ ಸಖಿಯರಿಗೆ ಯೋಜನೆ ಬಗ್ಗೆ ತಿಳಿಸಲಾಗಿ, ಅವರನ್ನು  ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ  ನೇಮಿಸಿಕೊಳ್ಳಲಾಗಿರುತ್ತದೆ.
ರೈತರ ಇಚ್ಛಾಶಕ್ತಿ ಆದ್ಯತೆ ಮೇಲೆ, ಸ್ಥಳೀಯ ಸಂಪನ್ಮೂಲ ವ್ಯಕ್ತಿಯ  ಬಳಿ ಹೆಸರನ್ನು ನೋಂದಾಯಿಸುವುದು ಮುಖ್ಯ. ನಂತರ ನೋಂದಾಯಿತ ರೈತರನ್ನು ಉದ್ದೇಶಿಸಿ., ಹಂತ ಹಂತಗಳಲ್ಲಿ ಗ್ರಾಮ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಅಗತ್ಯ ತರಬೇತಿ ನೀಡಿ, ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ.
ತಾಲ್ಲೂಕಿನಲ್ಲಿ ಒಟ್ಟು 625 ರೈತರನ್ನು ಪ್ರಥಮ ಹಂತದಲ್ಲಿ  ಯೋಜನೆಗೆ ಆಯ್ಕೆಗೊಳಿಸಲಾಗುತ್ತದೆ., ನಂತರದ ವರ್ಷಗಳಲ್ಲಿ ಯೋಜನೆಯನ್ನು ಇತರೆ ರೈತರಿಗೆ  ವಿಸ್ತರಿಸಲಾಗುತ್ತದೆ. ಹಾಗಾಗಿ., ಇತರೆ ರೈತರಿಗೆ ಯೋಜನೆಯ ಉದ್ದೇಶವಾಗಿ ಮಾದರಿ ರೀತಿಯಲ್ಲಿ ಕಾರ್ಯಕ್ರಮದ ಅನುಷ್ಠಾನ ಬಯಸಿದ ರೈತರು, ಮುಂಚೂಣಿಯಲ್ಲಿ ಹೆಸರು ನೋಂದಾಯಿಸುವುದು.

ಎಂದು ಪ್ರಕಾಶ್ ಕುಮಾರ್ ಯು ಎಂ ಸಹಾಯಕ ಕೃಷಿ ನಿರ್ದೇಶಕರು ಸಕಲೇಶಪುರ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *