ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ.24ರಂದು ನಡೆಯುವ ನವಗ್ರಹ ಪ್ರತಿಷ್ಟೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದ ಸಿದ್ದತೆಗಳು ಭರದಿಂದ ನಡೆಯುತ್ತಿದೆ.
![ಕೊಂಡೆವೂರು ಆಶ್ರಮದಲ್ಲಿ ನವಗ್ರಹ ಯಾಗಕ್ಕೆ ಭರದಿಂದ ಸಾಗುತ್ತಿರುವ ಸಿದ್ದತೆಗಳು](https://i0.wp.com/veekshakavani.com/wp-content/uploads/2024/03/ಯಾಗಕ್ಕೆ-ಭರದಿಂದ-ಸಾಗುತ್ತಿರುವ-ಸಿದ್ದತೆಗಳು.jpg?resize=640%2C400&ssl=1)
ಇದರ ಅಂಗವಾಗಿ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮಧೂರು, ಎಡನೀರು ಸಹಿತ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯಲ್ಲಿ ಸಲ್ಲಿಸಿ, ಆಶ್ರಮದಲ್ಲಿ ಕುಟ್ಟಿ ಮಾಡಿದ ಅಕ್ಕಿಯನ್ನು ನೈವೇದ್ಯಕ್ಕೆ ಸಮರ್ಪಿಸಲಾಯಿತು.
![ಕೊಂಡೆವೂರು ಆಶ್ರಮದಲ್ಲಿ ನವಗ್ರಹ ಯಾಗಕ್ಕೆ ಭರದಿಂದ ಸಾಗುತ್ತಿರುವ ಸಿದ್ದತೆಗಳು](https://i0.wp.com/veekshakavani.com/wp-content/uploads/2024/03/ನವಗ್ರಹ-ಯಾಗಕ್ಕೆ-ಸಿದ್ದತೆ.jpg?resize=640%2C400&ssl=1)
ಜೊತೆಗೆ ಯಾಗ ಸಮಿತಿಯ ಪದಾಧಿಕಾರಿಗಳು ಉಪಸ್ಥಿತಿತರಿದ್ದರು. ಆಶ್ರಮದಲ್ಲಿ ಯಾಗದ ಸಿದ್ದತೆಯ ಹಿನ್ನೆಲೆಯಲ್ಲಿ ಮಾತೆಯರ ಸಹಿತ ಕಾರ್ಯಕರ್ತರು ದಿನಪೂರ್ತಿ ಶ್ರಮದಾನದ ಮೂಲಕ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಚಪ್ಪರ, ಯಾಗದ ಕುಂಡ ಸಹಿತ ವಿವಿಧ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ.