ಉಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಟೆ ಸಂದರ್ಭದಲ್ಲಿ ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕರಸೇವಕರಿಗೆ ಸನ್ಮಾನ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಿತು.


ಬೆಳಿಗ್ಗೆ ಭಜನೆ, ಶ್ರೀರಾಮ ತರಕ ಮಂತ್ರ ಜಪ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಅಯೋಧ್ಯೆಯಲ್ಲಿ ಕರಸೇವಕರಾಗಿ ಸೇವೆಗೈದ ಶ್ರೀನಿವಾಸ ನಾಯ್ಕ್ ಹೇರೂರು ಹಾಗೂ ನಾರಾಯಣ ಪೂಜಾರಿ ಲಕ್ನಿಕೋಟೆ ಹೇರೂರು ಇವರನ್ನು ಸನ್ಮಾನಿಸಲಾಯಿತು.




