ಉಪ್ಪಳ: ಕುಂಬಳೆ ಬಳಿಯ ಕಂಚಿಕಟ್ಟೆ ನಿವಾಸಿ ಆರಿಕ್ಕಾಡಿ ಪಾಡಾಂಗರ ಶ್ರೀ ಭಗವತೀ ಕ್ಷೇತ್ರದ ಬನ್ನಂಗಳ ತರವಾಡು ಗುರಿಕಾರರು ನಾರಾಯಣ [78] ನಿಧನರಾದರು.
ಮಾ.17ರಂದು ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಕೂಡಲೇ ಕಾಸರಗೋಡಿನ ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರಗಳ ಪಾರಂಪರಿಕ ವಾದ್ಯ ಸೇವೆಯನ್ನು ನಡೆಸುತ್ತಿದ್ದರು.
ಆರ್.ಎಸ್.ಎಸ್ನ ಹಿರಿಯ ಕಾರ್ಯಕರ್ತರು ಹಾಗೂ ತುರ್ತು ಪರಿಸ್ಥಿಯ ಹೋರಾಟಗಾರರು ಆಗಿರುವ ಇವರು ಪರಿವಾರ ಸಂಘಟನೆಯ ವಿವಿಧ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಯಾಗಿದ್ದಾರೆ. ಮೃತರು ಪತ್ನಿ ಭವಾನಿ, ಮಕ್ಕಳಾದ ಧನಲಕ್ಷ್ಮಿ ದೀಪಕ್, ಪ್ರದೀಪ್, ಅಳಿಯ ಚಂದ್ರ, ಸೊಸೆಯಂದಿರಾದ ಮಲ್ಲಿಕ, ವೈಶಾಲಿ, ಸಹೋದರಿಯರಾದ ಗಿರಿಜ, ರಾಜೀವಿ, ಶಾಂಭವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.