ಉಪ್ಪಳ: ಮಂಗಲ್ಪಾಡಿ ಪಂಚಾಯತ್ ನಲ್ಲಿ ವಿವಿಧ ಸಂಘಟನೆಯಲ್ಲಿದ್ದ ಸುಮಾರು 30 ಅಂಗನವಾಡಿ ಸಿಬ್ಬಂದಿಗಳು ಆ ಸಂಘಟನೆಯನ್ನು ಬಿಟ್ಟು ಭಾರತೀಯ ಮಜ್ಡೂರ್ ಸಂಘ [ಬಿಎಂಎಸ್ಗೆ] ಸೇರ್ಪಡೆಗೊಂಡಿದ್ದಾರೆ.
ಕೈಕಂಬದ ಪಂಚಮಿ ಹಾಲ್ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಮಾವುಂಗಾಲ್ ರವರು ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸಂಘಟನೆಗೆ ಬರಮಾಡಿಕೊಂಡರು. ಈ ವೇಳೆ ಅಂಗನವಾಡಿ ವರ್ಕರ್ಸ್ ಸಂಘದ ರಾಜ್ಯ ಅಧ್ಯಕ್ಷೆ ಸಿಂಧೂ ಮನೋರಾಜ್, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪ್ಪಾಡಿ, ಅಂಗನವಾಡಿ ವರ್ಕರ್ಸ್ & ಹೆಲ್ಪರ್ಸ್ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶೋಭ ನಾಯ್ಕಾಪು ಹಾಗೂ ಜಿಲ್ಲಾ ಪದಾಧಿಕಾರಿಯಾದ ಸಚಿತಾ ಉಪ್ಪಳರವರು ಭಾಗವಹಿಸಿದರು.