ಉಪ್ಪಳ: ಉಪ್ಪಳ ಪ್ಲಾಟ್ವೊಂದರ ಕೊಠಿಯೊಳಗೆ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭಿಸಿದ ಘಟನೆ ಮಾ.ರಂದು ಸಂಜೆ ನಡೆದಿದೆ.
ಕುಂಬಳೆ ನಿವಾಸಿಯ ಪ್ಲಾಟ್ವೊಂದರಲ್ಲಿ ನೀರಿನ ಟ್ಯಾಂಕ್ ಬಳಿಯಿರುವ ವಸ್ತು ಸಗ್ರಹದ ಕೊಠಡಿಯೊಳಗೆ ಬೆಂಕಿ ತಗಲಿದೆ. ಈ ವೇಳೆ ಪರಿಸರದಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಈ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಸ್ಥಳೀಯರು ಹಾಗೂ ಉಪ್ಪಳದ ಅಗ್ನಿಶಾಮಕ ದಳ ತಲುಪಿ ಬೆಂಕಿಯನ್ನು ನಂದಿಸಿದ್ದಾರೆ.
ಕೊಠಿಡಿಯಲ್ಲಿದ್ದ ವಸ್ತುಗಳು ಉರಿದುಹೋಗಿದೆ. ಹೇಗೆ ಬೆಂಕಿ ತಗಲಿರುವುದಾಗಿ ತಿಳಿದುಬಂದಿಲ್ಲ. ಈ ಪ್ಲಾಟ್ನಲ್ಲಿ ಒಂದೇ ಕುಟುಂಬಗಳು ವಾಸವಾಗಿದ್ದೆನ್ನಲಾಗಿದೆ. ಸ್ಥಳೀಯರು ಸಕಾಲದಲ್ಲಿ ನಡೆಸಿದ ಕಾರ್ಯಾಚರಣೆಯಿಂದ ಅಪಾಯ ತಪ್ಪಿಹೊಗಿದೆ.