ಉಪ್ಪಳ: ಅಟ್ಟೆಗೋಳಿ ವಿಷ್ಣುನಗರದಲ್ಲಿ ಬೈಲುಕೋಲ

Share with

ಉಪ್ಪಳ: ಅಟ್ಟೆಗೋಳಿ ವಿಷ್ಣುನಗರದಲ್ಲಿ 49ನೇ ವರ್ಷದ ಶ್ರೀ ವಿಷ್ಣುಮೂರ್ತಿ ದೈವದ ಬೈಲು ಕೋಲ ನಡೆಯಿತು.

ಅಟ್ಟೆಗೋಳಿ ವಿಷ್ಣುನಗರದಲ್ಲಿ 49ನೇ ವರ್ಷದ ಶ್ರೀ ವಿಷ್ಣುಮೂರ್ತಿ ದೈವದ ಬೈಲು ಕೋಲ

ಗಣಹೋಮ, ಸತ್ಯನರಾಯಣ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಟ್ಟೆಗೋಳಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಉತ್ಸವಾಂಗಣಕ್ಕೆ ವಾದ್ಯ ಘೋಷ ದೊಂದಿಗೆ ಭಂಡಾರ ಆಗಮನದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು, ಮೇಲೇರಿಗೆ ಅಗ್ನಿಸ್ಪರ್ಶ, ಶ್ರೀ ದೈವದ ಕುಳಿಚ್ಚೋಟ್ಟಂ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶಾರದಾ ಆರ್ಟ್ಸ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ “ಕಲ್ಜಿಗದ ಮಾಯ್ಕಾರೆ ಪಂಜುರ್ಲಿ” ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ಬಳಿಕ ದೈವದ ಅಗ್ನಿಸೇವೆ, ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.


Share with

Leave a Reply

Your email address will not be published. Required fields are marked *