ಉಪ್ಪಳ: ನೆಲ್ಲಿಕತೀಯಾ ತರವಾಡು ಶ್ರೀ ವಿಷ್ಣುಮೂರ್ತಿ, ವಯನಾಟ್ ಕುಲವನ್, ಪಡಿಂಞರ್ ಚಾಮುಂಡಿ, ರಕ್ತೇಶ್ವರಿ ದೈವಗಳ ದೈವಸ್ಥಾನ ಕನಿಲ ಸಶಿಹಿತ್ಲು ಉಪ್ಪಳ ಇಲ್ಲಿನ ನೂತನ ತರವಾಡು ಮನೆಯ ಗೃಹಪ್ರವೇಶ, ನಾಗಕನ್ನಿಕೆ ಪ್ರತಿಷ್ಟಾಪನೆ ಮತ್ತು ರಕ್ತೇಶ್ವರಿ ದೈವದ ಪುನರ್ ಪ್ರತಿಷ್ಟೆ ಕಾರ್ಯಕ್ರಮ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಬಡಾಜೆ ಬೂಡು ಇವರ ನೇತೃತ್ವದಲ್ಲಿನಿನ್ನೆ ನಡೆಯಿತು.
ಬೆಳಿಗ್ಗೆ ನೂತನ ತರವಾಡು ಮನೆಯ ಗೃಹಪ್ರವೇಶ, ಗೊನೆ ಮುಹೂರ್ತ, ನಾಗಕನ್ನಿಕೆ ಪ್ರತಿಷ್ಟಾಪನೆ ಹಾಗೂ ರಕ್ತೇಶ್ವರಿ ದೈವದ ಪುನರ್ ಪ್ರತಿಷ್ಟೆ, ಅನ್ನಸಂತರ್ಪಣೆ ನಡೆಯಿತು.