ಮಂಜೇಶ್ವರ : ತೂಮಿನಾಡು ಅಂಗನವಾಡಿ ಪಕ್ಕದಲ್ಲಿರುವ ಬಾವಿಯೊಂದು ತ್ಯಾಜ್ಯಗಳಿಂದ ತುಂಬಿದೆ

Share with

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ೨ ನೇ ವಾರ್ಡಿನ ತೂಮಿನಾಡು ಅಂಗನವಾಡಿ ಪಕ್ಕದಲ್ಲಿರುವ ಬಾವಿಯೊಂದು ತ್ಯಾಜ್ಯಗಳಿಂದ ತುಂಬಿ ಕಲುಷಿತಗೊಂಡಿದೆ. ಸಂಬಂಧಪಟ್ಟವರು ಬಾವಿಯನ್ನು ಶುದ್ಧೀಕರಿಸಿದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಲುಷಿತಗೊಂಡ ಈ ನೀರನ್ನು ಅಂಗನವಾಡಿ ಮಕ್ಕಳು ಸಹಿತ ಈ ಕಾಲನಿಯಲ್ಲಿರುವವರು ಉಪಯೋಗಿಸುತಿದ್ದಾರೆ.

ಈ ಬಾವಿಯ ನೀರಿನ ಸ್ವಚ್ಚತೆ ಆಗಿಲ್ಲ. ಪಂಚಾಯತು ಅಧಿಕೃತರು ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳು ಕೂಡಾ ಇದೇ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.ಊರವರು ಈ ಬಗ್ಗೆ ಹಲವು ಸಲ ಸಂಬಂಧಪಟ್ಟವರನ್ನು ವಿನಂತಿಸಿಕೊಂಡರೂ ಯೂರೂ ಇತ್ತ ಕಡೆ ಗಮನ ಹರಿಸಿಲ್ಲವೆಂದು ಸ್ಥಳೀಯರು ಹೇಳುತಿದ್ದಾರೆ.

ಈ ಬಾವಿಯ ನೀರಿನಲ್ಲಿ ಕಸ ಕಡ್ಡಿ ಜೊತೆಯಾಗಿ ತ್ಯಾಜ್ಯ ಹಾಗೂ ಕೆಸರು ತುಂಬಿ ಕೊಂಡಿದೆ. ಬಾವಿಯಲ್ಲಿರುವ ನೀರಿನಲ್ಲಿ ಸಣ್ಣ ಪ್ರಮಾಣದ ಹುಳಗಳು ಕೂಡಾ ಆಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಬಾವಿ ಇದೀಗ ಸಾಂಕ್ರಾಮಿಕ ರೋಗದ ಕೇಂದ್ರವಾಗಿ ಪರಿಣಮಿಸಿದೆ.


Share with

Leave a Reply

Your email address will not be published. Required fields are marked *