ತೋಟಕ್ಕೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕೃಷಿಕನ ಗುತ್ತಿಗೆಯಿಂದ ಎರಡೂವರೆ ಪವನ್ ಚಿನ್ನದ ಸರ ಕಸಿದು ಪರಾರಿ

Share with

ಉಪ್ಪಳ: ಕೃಷಿಕ ತೋಟಕ್ಕೆ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಕುತ್ತಿಗೆಯಲ್ಲಿದ್ದ ಎರಡೂವರೆ ಪವನ್ ಚಿನ್ನದ ಸರವನ್ನು ಕಸಿದು ಪರಾರಿಯಾದ್ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಈ ಸಂಬAಧ ಪೋಲೀಸರು ತನಿಖೆ ಮುಂದುವರಿಸಿದ್ದಾರೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚೇವಾರು ಮಲೆನಾಡ ಹೆದ್ದಾರಿ ರಸ್ತೆಯ ಕಟ್ಟದಮನೆ ನಿವಾಸಿ ಹಿರಿಯ ಕೃಷಿಕ ಗೋಪಾಲಕೃಷ್ಣ ಭಟ್‌ಎಂಬವರ ಗುತ್ತಿಗೆಯಿಂದ ಸರ ಅಪಹರಿಸಲಾಗಿದೆ.

ಶನಿವಾರ ಬೆಳಿಗ್ಗೆ ೬.೩೦ರ ವೇಳೆ ಮನೆಯ ಸುಮಾರು ೧೫೦ ಮೀಟರ್ ಅಂತರದಲ್ಲಿ ಘಟನೆ ನಡೆದಿದೆ. ಇವರು ಬೆಳಿಗ್ಗೆ ಮನೆಯಿಂದ ನಡೆದು ರಸ್ತೆ ದಾಟಿ ತೋಟಕ್ಕೆ ತೆರಳುವ ರಸ್ತೆಗೆ ತಲುಪಿದಾಗ ಚೇವಾರು ಭಾಗದಿಂದ ಬೈಕ್‌ನಲ್ಲಿ ಇಬ್ಬರು ತಲುಪಿದ್ದಾರೆ. ಬೈಕನ್ನು ಸ್ಟಾಟ್ ಬಂದು ಮಾಡದೆ ನಿಲ್ಲಿಸಿ ಈ ಪೈಕಿ ಹಿಂಬದಿ ಸವಾರ ಇಳಿದು ಗೋಪಾಲಕೃಷ್ಣ ಭಟ್ ರವರ ಬಳಿಗೆ ಬಂದು ಏನೂ ಮಾತನಾಡದೆ ಗುತ್ತಿಗೆಯಲ್ಲಿದ್ದ ಸರವನ್ನು ಅಪಹರಿಸಿ ಓಡಿ ಬೈಕ್‌ಗೆ ಹತ್ತಿ ಇಬ್ಬರು ಮತ್ತೆ ಚೇವಾರು ಕಡೆಗೆ ಅಮಿತ ವೇಗದಲ್ಲಿ ಸಂಚರಿಸಿರುವುದಾಗಿ ದೂರಲಾಗಿದೆ.

ಇಬ್ಬರು ಹೆಲ್ಮೆಟ್ ಧರಿಸಿರುವುದರಿಂದ ಗುರುತು ಪತ್ತೆಯಾಗಲಿಲ್ಲ. ಮುಂಜಾನೆ ಹೊತ್ತು ಆಗಿದುದರಿಂದ ಜನರು ಯಾರು ಇರಲಿಲ್ಲ. ಈ ಬಗ್ಗೆ ಕುಂಬಳೆ ಪೋಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ಸ್ಥಳಕ್ಕೆ ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ. ಇವರ ಗೇಟ್ ಬಳಿಯಿರುವ ಸಿಸಿಯಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಓಡಿಹೋಗುತ್ತಿರುವ ದೃಶ್ಯ ಪತ್ತೆಯಾಗಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.


Share with

Leave a Reply

Your email address will not be published. Required fields are marked *