ಉಪ್ಪಳ: ಶ್ರೀ ಧೂಮಾವತಿ ಬಂಟ ಮತ್ತು ವರ್ಣರ ಪಂಜುರ್ಲಿ, ಕಲ್ಲುರ್ಟಿ, ಕೊರಟಿ, ಗುಳಿಗ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ನಾಳೆ [1-5-2024] ರಿಂದ 4-5-2024 ರವರೆಗೆ ಕಯ್ಯಾರು ಹೊಸ ಚಾವಡಿ ಮತ್ತು ಮನೆಯಲ್ಲಿ ನಡೆಯಲಿದೆ. ಗುತ್. ನಾಳೆ ಸಂಜೆ 5ಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು, 2ರಂದು ಬೆಳಗ್ಗೆ 7ಕ್ಕೆ ಗಣಪತಿ ಹೋಮ, ನಾಗ ತಂಬಿಲ, ಕಲಶಪೂಜೆ ಮುಂತಾದ ವೈದಿಕ ಕಾರ್ಯಕ್ರಮಗಳು, ಸಂಜೆ 6ಕ್ಕೆ ಅಧಿವಾಸ, ದುರ್ಗಾಪೂಜೆ.
3ರಂದು ಬೆಳಗ್ಗೆ 7ಕ್ಕೆ ಅಧಿವಾಸ ಹೋಮ, ಗಣಪತಿ ಹೋಮ, ಕಲಶಪೂಜೆ, 10.10ಕ್ಕೆ ಮೂಹೂರ್ತ, ಹೊಸ ಚಾವಡಿಯಲ್ಲಿ ಧರ್ಮದೈವ, ಶ್ರೀ ಧೂಮಾವತಿ ಬಂಟ ದೈವಗಳ ಪುನರ್ ಪ್ರತಿಷ್ಠೆ, ಕಲುರ್ಟಿ, ಪಂಜುರ್ಲಿ, ಕೊರಟಿ, ಗುಳಿಗ ದೈವಗಳಿಗೆ ಗುತ್ತು ಮನೆಯಲ್ಲಿ ಕಲಶಾಭಿಷೇಕ, ತಾಂಬಿಲ ವಿತರಣೆ, ದೇ. ಪ್ರಸಾದ್, ಮಧ್ಯಾಹ್ನ 12. 30 ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನದೊಂದಿಗೆ, ತಂತ್ರಿವರ್ಯ ಬ್ರಹ್ಮಶ್ರೀ ಸಾಲನತ್ತಾಯ ವಿಷ್ಣು ಆಸ್ರ, ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ , ಜ್ಯೋತಿಷಿ ಸಜೇಶ್ ಪೊದುವಾಳ್ ಕುಂಬಳೆ ಇವರಿಗೆ ಗೌರ್ವಾರ್ಪಣೆ, ಮಧ್ಯಾಹ್ನ ಅನ್ನಸಂತರ್ಪಣೆ, ೨ರಿಂದ ಭಜನೆ, ಸಂಜೆ ೪ರಿಂದ ಭಕ್ತಿಗಾನ ಸುಧಾ, ೬ಕ್ಕೆ ಧರ್ಮದೈವಗಳ ಭಂಡಾರ ಆರೋಹಣ, ೭ರಿಂದ ಗುಳಿಗ ದೈವದ ಕೋಳ, ರಾತ್ರಿ ಅನ್ನಸಂತರ್ಪಣೆ, ೯ರಿಂದ ಕೊರತಿ, ಕಲ್ಲುರ್ಟಿ, ಪಂಜುರ್ಲಿ ದೈವಗಳ ಕೋಲ, ೪ರಂದು ಬೆಳಿಗ್ಗೆ ೧೦ರಿಂದ ಶ್ರೀ ಧೂಮಾವತೀ ಬಂಟ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ೨ಕ್ಕೆ ಶ್ರೀ ದೈವಗಳ ಪ್ರಸಾದ ವಿತರಣೆ, ಸಂಜೆ ೪ಕ್ಕೆ ಶ್ರೀ ದೈವಗಳ ಭಂಡಾರ ಅವರೋಹಣ ನಡೆಯಲಿದೆ.