ಬಿಜೆಪಿಯಿಂದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಬಲಿದಾನ ದಿನಾಚರಣೆ

Share with


ಕುಂಬಳೆ : ಕುಂಬಳೆ ಬಿಜೆಪಿ ಮಂಡಲ ಸಮಿತಿ ವತಿಯಿಂದ ಅಖಂಡ ಭಾರತದ ಏಕತೆಗೆ ಶ್ರಮಿಸಿ ಪ್ರಾಣತೆತ್ತ ಧೀಮಂತ ನಾಯಕ ಮತ್ತು ದೇಶಭಕ್ತ ಜನಸಂಘದ ಸಂಸ್ಥಾಪಕರಾದ ಡಾ .ಶ್ಯಾಮ ಪ್ರಸಾದ ಮುಖರ್ಜಿ ರವರ ಬಲಿದಾನ ದಿನವನ್ನು ಕುಂಬಳೆ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯರಾದ ವಿ ರವೀಂದ್ರನ್ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಸುನಿಲ್ ಅನಂತಪುರ ಅವರು ವಹಿಸಿದರು. ಬಿಜೆಪಿ ರಾಜ್ಯ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ್ ಶೆಟ್ಟಿ,ಜಿಲ್ಲಾ ಸಮಿತಿ ಸದಸ್ಯರಾದ ಮುರಳೀಧರ ಯಾಧವ ,ಮಂಡಲ ಕಾರ್ಯದರ್ಶಿ ಕೆ. ಸುಧಾಕರ್ ಕಾಮತ್, ಧನರಾಜ ಪ್ರತಾಪನಗರ, ಕುಂಬಳೆ ಉತ್ತರ ವಲಯ ಅಧ್ಯಕ್ಷರಾದ ಪ್ರದೀಪ್ ಆರಿಕಾಡಿ, ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ಮಹೇಶ್ ಪುಣಿಯೂರು ,ಜನಪ್ರತಿನಿದಿಗಳಾದ ವಿವೇಕಾನಂದ ಶೆಟ್ಟಿ,ಜನರ‍್ಧನ್ ಕಣ್ಣೂರ್, ವಿದ್ಯಾ ಏನ್ ಪೈ, ಹಿರಿಯರಾದ ಗೋಪಾಲ ಕಂಚಿಕಟ್ಟೆ, ಶಶಿ ಕುಂಬಳೆ, ಪಂಚಾಯತ್ ಸಮಿತಿ ಉಪಾಧ್ಯಕ್ಷರಾದ ಜಗದೀಶ್ ಪೇರಾಲ ಉಪಸ್ಥಿತರಿದ್ದರು.ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಮಯ್ಯ ಸ್ವಾಗತಿಸಿ. ಅನಿಲ್ ಕುಮಾರ್ ವಂದಿಸಿದರು[


Share with

Leave a Reply

Your email address will not be published. Required fields are marked *