ನಯಬಜಾರ್‌ನ ಲಯನ್ಸ್ ಸೇವಾ ಮಂದಿರದಲ್ಲಿ ೬೦೦ನೇ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಉದ್ಘಾಟನೆ

Share with


ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ, ಉಪ್ಪಳ, ಶ್ರೀ ಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ೬೦೦ನೇ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಹಾಗೂ ರಿಯಲ್ ಲ್ಯಾಬ್ ಹೊಸಂಗಡಿ ಇವರಿಂದ ಉಚಿತ ಮಧುಮೇಹ ತಪಾಸಣೆ ಶಿಬಿರ 23.6.2024 ರಂದು ನಯಬಜಾರ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಲಕ್ಷ÷್ಮಣ್ ಕುಂಬಳೆ ಅಧ್ಯಕ್ಷತೆ ವಹಿಸಿದರು. ಡಿಸ್ಟಿಕ್ ಗವರ್ನರ್ ಲಯನ್ ಸಿಎ ಟಿ.ಕೆ ರಜೀಸ್ ದೀಪ ಬೆಳಗಿಸಿ ಉದ್ಘಾಟಿಸುವರು. ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜಂಗಾವು ಆಡಳಿತಾಧಿಕಾರಿ ಲಯನ್ ಡಾ.ಯಂ. ಶ್ರೀಧರ ಭಟ್ ಪ್ರಸ್ತಾವಿಕ ಭಾಷಣ ಮಾಡಿದರು. ನೇತ್ರ ತಜ್ಞ ಡಾ.ಆನಂದ್ ಎಸ್.ಹಂಡಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿಎಂ. ಶ್ರೀನಿವಾಸ್ ಪೈ, ರೀಜನಲ್ ಚಯರ್ ಪರ್ಸನ್ ಭಾರ್ಗವ ಮೊದಲಾದವರು ಉಪಸ್ಥಿತರಿದ್ದರು. ಶರ್ಮಿಳಾ ಕಮಲಾಕ್ಷ ಪ್ರಾರ್ಥನೆ ಹಾಡಿದರು. ಕ್ಲಬ್ ಕಾರ್ಯದರ್ಶಿ ಲಯನ್ ಅಶೋಕ್ ಸ್ವಾಗತಿಸಿದರು. ಕೋಶಾಧಿಕಾರಿ ಲಯನ್ ಕಮಲಾಕ್ಷ.ಕೆ ಪಂಜ ವಂದಿಸಿದರು. ನೂರಾರು ಮಂದಿ ಶಿಬಿರದ ಪ್ರಯೋಜನೆಯನ್ನು ಪಡೆದರು. ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜಂಗಾವು, ರಿಯಲ್ ಲ್ಯಾಬ್ ಹೊಸಂಗಡಿ ಇದರ ಸಿಬ್ಬಂದಿ ವರ್ಗ ಹಾಗೂ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ನೇತೃತ್ವ ನೀಡಿದರು.


Share with

Leave a Reply

Your email address will not be published. Required fields are marked *