ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತ ಸಂಕಲ್ಪ

Share with



ಉಪ್ಪಳ :  ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದಿ.21.07.2024 ರ ಗುರುಪೂರ್ಣಿಮೆಯ ಶುಭದಿನ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 21 ನೇ ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡರು. ಪೂರ್ವಾಹ್ನ ಗಣಹೋಮ, ಸದ್ಗುರು ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಮೃತಾಭಿಶೇಕ, ನಂತರ ಶ್ರೀ ವ್ಯಾಸಪೂಜೆ ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನಡೆದವು. ಇದೇ ಸಂದರ್ಭದಲ್ಲಿ ಪೂಜ್ಯರು ಹಸಿರು ಪರಿಸರಕ್ಕಾಗಿ ಆಸಕ್ತ ಭಕ್ತಾದಿಗಳಿಗೆ ವಿವಿಧ ಬಗೆಯ ಗಿಡಗಳನ್ನು ನೀಡಿ ಆಶೀರ್ವದಿಸಿದರು.
ಸಂಜೆ ಗಾಯತ್ರೀ ಮಾತೃಮಂಡಳಿಯ ಮಾತೆಯರಿಂದ ಭಜನಾ ಸೇವೆ ನಡೆಯಿತು. ನಂತರ ಶ್ರೀ ಗುರು ಪಾದುಕಾ ಪೂಜೆ ನಡೆದ ಬಳಿಕ ಆಶೀರ್ವಚನದಲ್ಲಿ ಪೂಜ್ಯರು ” ಸದ್ಗುರು ಶ್ರೀ ನಿತ್ಯಾನಂದರು ಸಾರಿದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಸ್ತ ಶ್ರೀ ಗುರುಪರಂಪರೆಯ ಅನುಗ್ರಹಕ್ಕೆ ಭಾಜನರಾಗೋಣ” ಎಂದು ನುಡಿದರು. ಉಪಸ್ಥಿತರಿದ್ದ ಭಕ್ತಾದಿಗಳು ಗುರುಪೂರ್ಣಿಮೆಯ ಈ ಶುಭದಿನ ಶ್ರೀಗುರುಗಳಿಗೆ ಫಲಕಾಣಿಕೆ ಸಮರ್ಪಿಸಿ ಆಶೀರ್ಮಂತ್ರಾಕ್ಷತೆ ಪಡೆದು ಧನ್ಯರಾದರು.
ಚಾತುರ್ಮಾಸ್ಯದ ಪ್ರತೀದಿನ ಸಂಜೆ ವಿವಿಧ ಭಜನಾ ತಂಡಗಳಿoದ ಭಜನಾಸೇವೆ , ಪ್ರತೀ ಭಾನುವಾರ ವಿದ್ವಾಂಸರುಗಳ ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.


Share with

Leave a Reply

Your email address will not be published. Required fields are marked *