ಬಿಎಂಎಸ್ ಕಾರ್ಯಕರ್ತ ನಿಧನ

Share with


ಉಪ್ಪಳ: ಐಲ ಶಿವಾಜಿನಗರ ನಿವಾಸಿ ಬಿಎಂಎಸ್ ಕಾರ್ಯಕರ್ತ ವಸಂತ [೫೬] ನಿಧನರಾದರು.  ಅಸೌಖ್ಯ ಉಂಟಾಗಿದ್ದು, ದೇರಳಕಟ್ಟೆ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂಧಿಸದೆ ಭಾನುವಾರ ಭೆಳಿಗ್ಗೆ ನಿಧನರಾದರು. ಇವರು ಮೀಯಪದವುನಲ್ಲಿ ಟಯರ್ ಅಂಗಡಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಇವರು ಐಲ ಮಲಯಾಳಿ ಬಿಲ್ಲವ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.  ಬಿಎಂಎಸ್ ನಿರ್ಮಾಣ ಕಾರ್ಮಿಕ ಸಂಘದ ಐಲ ಯೂನಿಟ್ ನ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಸುನಿತಾ, ಪುತ್ರ ಸೃಜನ್, ಸಹೋದರ, ಸಹೋದರಿಯರಾದ ಯಶೋದ, ಶಾರದಾ, ಮಾಧವ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಕೃಷ್ಣ, ತಾಯಿ ಕಮಲ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ  ಬಿಜೆಪಿ ಮುಖಂಡರಾದ ರವೀಶ ತಂತ್ರಿ ಕುಂಟಾರು, ವಿಜಯ ಕುಮಾರ್ ರೈ, ವಸಂತ ಕುಮಾರ್ ಮಯ್ಯ, ಸುನಿಲ್ ಕುಮಾರ್ ಅನಂತಪುರ ಹಾಗೂ ಬಿಎಂಎಸ್ ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.  ನಿಧನಕ್ಕೆ ಐಲ ಮಲಯಾಳಿ ಬಿಲ್ಲವ ಸಂಘ,  ಶ್ರೀ ದುರ್ಗಾಕೃಪಾ ವೀರ ಕೇಸರಿ ವ್ಯಾಯಾಮ ಶಾಲೆ, ಶ್ರೀ ದುರ್ಗಾಪರಮೇಶ್ವರೀ ಕಲಾ ಸಂಘ ಐಲ, ಶಿವಾಜಿ ಪ್ರೆಂಡ್ಸ್ ಶಿವಾಜಿನಗರ ಐಲ,  ಶ್ರೀ ಶಾರದೋತ್ಸವ, ಶ್ರೀ ಗಣೇಶೋತ್ಸವ ವಿಸರ್ಜನಾ ಸ್ವಾಗತ ಸಮಿತಿ ಐಲ ಶಿವಾಜಿನಗರ ಸಂತಾಪ ಸೂಚಿಸಿದೆ.


Share with

Leave a Reply

Your email address will not be published. Required fields are marked *