ಉಪ್ಪಳ: ವಿವಿಧ ಪ್ರದೇಶಗಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುoಟುಮಾಡಿದೆ. ಇದರಂತೆ ಪ್ರತಾಪನಗರದ ಶಿವಶಕ್ತಿ ಮೈದಾನದಲ್ಲಿಯೂ ನಾಯಿಗಳ ಹಿಂಡು ಸ್ಥಳೀಯರನ್ನು ಆತಂಕಗೊಳಿದೆ. ಕಳೆದ ಒಂದು ತಿಂಗಳಿoದ ಶಿವಶಕ್ತಿ ಮೈದಾನದಲ್ಲಿ ನಿರಂತರವಾಗಿ ಸುಮಾರು 10ರಷ್ಟು ಅಲೆಮಾರಿ ನಾಯಿಗಳ ಹಿಂಡು ಈ ಪರಿಸರದ ಗಣೇಶ ಮಂದಿರ, ಗಾಯತ್ರಿ ಮಂದಿರ, ಗುಳಿಗ ಬನ ಪರಿಸರದಲ್ಲಿ ಅಲೆದಾಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಗಾಗುವಂತೆ ಮಾಡಿದೆ. ದ್ವಿಚಕ್ರ ವಾಹನ ಸವಾರರನ್ನು, ನಡೆದು ಹೋಗುವವರನ್ನು ಬೆನ್ನಟ್ಟುತ್ತಿರುವುದಾಗಿ ದೂರಲಾಗಿದೆ. ಇದರಿಂದ ಈ ಪರಿಸರದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರ ಸಹಿತ ಊರವರು ಆತಂಕಗೊoಡಿದ್ದಾರೆ. ಮೈದಾನದಲ್ಲಿ ಬೆಳಕು ನೀಡುತ್ತಿದ್ದ ದಾರಿ ದೀಪ ಉರಿಯದೆ ಇರುವುದರಿಂದ ರಾತ್ರಿ ಹೊತ್ತಲ್ಲಿ ಸಂಚರಿಸುವರಿಗೆ ಆತಂಕಉoಟಾಗಿದೆ. ಸಂಬಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.