ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ವ್ಯಾಪಕ ಗೊಂಡ ಬೀದಿ ನಾಯಿಗಳ ಕಾಟ: ಸ್ಥಳೀಯರಲ್ಲಿ ಆತಂಕ

Share with


ಉಪ್ಪಳ:  ವಿವಿಧ ಪ್ರದೇಶಗಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುoಟುಮಾಡಿದೆ. ಇದರಂತೆ ಪ್ರತಾಪನಗರದ ಶಿವಶಕ್ತಿ ಮೈದಾನದಲ್ಲಿಯೂ ನಾಯಿಗಳ ಹಿಂಡು ಸ್ಥಳೀಯರನ್ನು ಆತಂಕಗೊಳಿದೆ. ಕಳೆದ ಒಂದು ತಿಂಗಳಿoದ ಶಿವಶಕ್ತಿ ಮೈದಾನದಲ್ಲಿ  ನಿರಂತರವಾಗಿ ಸುಮಾರು 10ರಷ್ಟು ಅಲೆಮಾರಿ ನಾಯಿಗಳ ಹಿಂಡು ಈ ಪರಿಸರದ ಗಣೇಶ ಮಂದಿರ, ಗಾಯತ್ರಿ ಮಂದಿರ, ಗುಳಿಗ ಬನ ಪರಿಸರದಲ್ಲಿ ಅಲೆದಾಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಗಾಗುವಂತೆ ಮಾಡಿದೆ. ದ್ವಿಚಕ್ರ ವಾಹನ ಸವಾರರನ್ನು, ನಡೆದು ಹೋಗುವವರನ್ನು ಬೆನ್ನಟ್ಟುತ್ತಿರುವುದಾಗಿ ದೂರಲಾಗಿದೆ. ಇದರಿಂದ  ಈ ಪರಿಸರದ  ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರ ಸಹಿತ ಊರವರು ಆತಂಕಗೊoಡಿದ್ದಾರೆ. ಮೈದಾನದಲ್ಲಿ ಬೆಳಕು ನೀಡುತ್ತಿದ್ದ ದಾರಿ ದೀಪ ಉರಿಯದೆ  ಇರುವುದರಿಂದ  ರಾತ್ರಿ ಹೊತ್ತಲ್ಲಿ ಸಂಚರಿಸುವರಿಗೆ ಆತಂಕಉoಟಾಗಿದೆ. ಸಂಬಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *