ಉಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳ ದ ಡಾ ಡಿ ವೀರೇಂದ್ರ ಹೆಗ್ಗಡೆಯವರ 57ನೇ ವರ್ಷದ ಪಟ್ಟಾಭಿಷೇಕ ವರ್ಧ್ಯಂತುತ್ಸವಕ್ಕೆ ಶುಭಾಶಯಗಳನ್ನು ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಶ್ರೀ ಕ್ಷೇತ್ರಕ್ಕೆ ತೆರಳಿ ಕೋರಿದರು. ಮತ್ತು ಮುಳ್ಳೇರಿಯದಲ್ಲಿ ನಡೆಯುತ್ತಿರುವ 1878ನೇ ಮದ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಇದರ ರಾಜ್ಯ ಕಾರ್ಯದರ್ಶಿ ವಿವೇಕ್ ವಿನಸೆಂಟ್ ಪಾಯಸ್ ಕಾಸರಗೋಡು ಜಿಲ್ಲೆ ಜನ ಜಾಗೃತಿ ವೇದಿಕೆ ಟ್ರಸ್ಟ್ ಇದರ ನಿಕಟ ಪೂರ್ವ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ ಬಾಗ್. ಮದ್ಯವರ್ಜನ ವ್ಯಸ್ಥಾಪನ ಸಮಿತಿ ಅಧ್ಯಕ್ಷರಾದ ಶಿವಕೃಷ್ಣ ಭಟ್ ಬಳಪು, ಗೌರವ ಅಧ್ಯಕ್ಷರಾದ ರತನ್ ಕುಮಾರ್ ಪಾಂಡಿ, ಯೋಜನಾಧಿಕಾರಿ ಮುಕೇಶ್ ಗಟ್ಟಿ ಮೇಲ್ವಿಚಾರ ಸುರೇಶ್ ಉಪಸ್ಥಿತರಿದ್ದರು.