ಬಿಗ್‌ಬಾಸ್: ಎಲ್ಲರ ಊಹೆಯಂತೆ ದೊಡ್ಮನೆಯಿಂದ ಈ ಸ್ಪರ್ಧಿ ಔಟ್..!‌

Share with

ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಆಟ ಶುರುವಾಗಿ ನಾಲ್ಕು ವಾರಗಳು ಕಳೆದಿವೆ. ನಾಲ್ಕನೇ ವಾರದಲ್ಲಿ ದೊಡ್ಡಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಅಗಲಿದ್ದಾರೆ. ಕಿಚ್ಚ ಸುದೀಪ್ (Kiccha Sudeep) ಅವರ ಅನುಪಸ್ಥಿತಿಯಲ್ಲಿ ಈ ವಾರದ ವೀಕೆಂಡ್ ನಡೆಯಲಿದೆ. ಆದರೆ ಮನೆಯಿಂದ ಒಬ್ಬ ಸದಸ್ಯ ಆಚೆ ಹೋಗುವುದು ಮಾತ್ರ ಅಧಿಕೃತವಾಗಿದೆ. ಆಟ ಮುಂದುವರೆಯುತ್ತಿದ್ದಂತೆ ಒಬ್ಬೊಬ್ಬ ಸ್ಪರ್ಧಿಗಳು ಬಿಗ್ ಬಾಸ್ ಟ್ರೋಫಿ ಗೆಲ್ಲುವ ರೇಸ್ ನಿಂದ ಹೊರಬೀಳುತ್ತಿದ್ದಾರೆ.

ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್ ಸುರೇಶ್ ಈ ವಾರ ಮನೆಯಿಂದ ಆಚೆ ಬರಲು ನಾಮಿನೇಟ್ ಆಗಿದ್ದರು. ಇವರುಗಳ ಪೈಕಿ ಒಬ್ಬರು ಇವತ್ತು ಬಿಗ್ ಬಾಸ್ ಮನೆಯಿಂದ ಅಚೆ ಬರಲಿದ್ದಾರೆ. ಮೂಲಗಳ ಪ್ರಕಾರ ನಾಮಿನೇಟ್ ಆಗಿರುವ ಪೈಕಿ ಮಾನಸ ಅವರಿಗೆ ಅತಿ ಕಡಿಮೆ ವೋಟ್ ಬಿದ್ದಿದ್ದು, ಅವರು ಈ ವಾರ ಮನೆಯಿಂದ ಆಚೆ ಬರಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲ ದಿನದಿಂದ ಮಾನಸ ಅವರು ಬಿಗ್ ಬಾಸ್ ಮನೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದಾರೆ. ಅವರು ಮನೆಯಲ್ಲಿ ಯಾವುದರಲ್ಲೂ ಸರಿಯಾಗಿ ಭಾಗಿಯಾಗುತ್ತಿಲ್ಲ. ಇದಕ್ಕಿಂತ ಅವರು ಮನೆಯಿಂದ ಆಚೆ ಬರುವುದೇ ಉತ್ತಮವೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು.

ಇದಲ್ಲದೆ ದೊಡ್ಡನೆಯ ಸ್ಪರ್ಧಿಗಳಲ್ಲೂ ಮಾನಸ ಅವರು ದೊಡ್ಡ ಧ್ವನಿಯಲ್ಲಷ್ಟೇ ಮಾತನಾಡುತ್ತಾರೆ. ಯಾವುದರಲ್ಲೂ ಮುಂದೆ ಬರಲ್ಲ ಎನ್ನುವ ಅಭಿಪ್ರಾಯವಿತ್ತು. ಹೀಗಾಗಿ ಮಾನಸ ಅವರು ದೊಡ್ಡನೆಯಿಂದ ಇವತ್ತು ಆಚೆ ಬರಲಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಶುರುವಾದ ನಾಲ್ಕೆ ವಾರದಲ್ಲಿ ನಾಲ್ಕು ಸ್ಪರ್ಧಿಗಳು ಆಚೆ ಬಂದಿದ್ದಾರೆ. ಮೊದಲಿಗೆ ಯುಮನಾ, ಆ ಬಳಿಕ ನಿಯಮದ ಉಲ್ಲಂಘನೆ ಮಾಡಿದ ಜಗದೀಶ್, ರಂಜಿತ್ ಈಗ ಮಾನಸ ಅವರು ಆಚೆ ಬಂದಿದ್ದಾರೆ.


Share with

Leave a Reply

Your email address will not be published. Required fields are marked *