ಉಪ್ಪಳ: ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಲಾದ ಚರಂಡಿಗೆ ಹಾಸಿದ ಕಾಂಕ್ರೀಟ್ ಸ್ಲಾಬ್ ಅಲ್ಲಲ್ಲಿ ಹಾನಿಗೊಂಡು ಕುಸಿದು ಬೀಳುವ ಸಾಧ್ಯತೆಯಿದ್ದು ಇದರಿಂದ ವಾಹನ ಸಂಚಾರ ಭೀತಿ ಸೃಷ್ಟಿಯಾಗಿದೆ.
ಹೊಸಂಗಡಿ, ಉಪ್ಪಳ ಸಹಿತ ವಿವಿಧೆಡೆಗಳ ಸರ್ವೀಸ್ ರಸ್ತೆಯಲ್ಲಿ ಸ್ಲಾಬ್ ಹಾನಿಗೊಂಡಿದೆ. ವಾಹನಗಳಿಗೆ ಸೈಡ್ ನೀಡುವ ವೇಳೆ ಹೆಚ್ಚಾಗಿ ಘನ ಗಾತ್ರದ ವಾಹನಗಳು ಚರಂಡಿ ಮೇಲಿನಿಂದ ಸಂಚರಿಸುವುದೇ ಸ್ಲಾಬ್ ಹಾನಿಯಾಗಲು ಕಾರಣವೆಂದು ದೂರಲಾಗಿದೆ. ಹಾನಿಗಿಡಾದ ಸ್ಲಾಬ್ ಚರಂಡಿ ಒಳಗಡೆ ಕುಸಿದು ಬಿದ್ದಲ್ಲಿ ವಾಹನ ಸಂಚಾರದ ವೇಳೆ ಅಪಘಾತ ಉಂಟಾಗಬಹುದಾಗಿದೆ. ಹೊಸಂಗಡಿಯಲ್ಲಿ ಹಾನಿಗೀಡಾಗಿ ಅಪಾಯದಂಚಿನಲ್ಲಿರುವ ಸ್ಲಾಬ್ ಬಳಿ ಭದ್ರತೆಗಾಗಿ ಡಿವಡರನ್ನು ಇರಿಸಲಾಗಿದೆ. ಸಂಬoಧಪಟ್ಟ ಹೆದ್ದಾರಿ ಇಲಾಖೆ ಉದ್ಯೋಗಸ್ಥರು ಹಾನಿಗೀಡಾದ ಸ್ಲಾಬ್ನ ದುರಸ್ಥಿಗೊಳಿಸಿ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.