ಜೋಡುಕಲ್ಲು : ಸೇವಾಭಾರತಿ (ರಿ. )ಜೋಡುಕಲ್ಲು ಇದರ ಆಶ್ರಯದಲ್ಲಿ 36 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮೊನ್ನೆ ರವಿವಾರ ಜೋಡುಕಲ್ಲು ತಪೋವನದಲ್ಲಿ ಜರಗಿತು.ಸೇವಾಭಾರತಿಯ ಅಧ್ಯಕ್ಷರಾದ ಶ್ರೀ ದಾಮೋದರ ಉಬರಳೆ, ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಕುಂಞಣ್ಣ ರೈ ಕಯ್ಯಾರು, ಪ್ರಧಾನ ಕಾರ್ಯದರ್ಶಿ ಶ್ರೀ ನಿಖಿಲ್ ಸುಲಾಯ ಪರಂಬಳ,ಕೋಶಾಧಿಕಾರಿ ಕೆ. ಪಿ. ನಾರಾಯಣ ಪಟ್ಲ,ಉಪಾಧ್ಯಕ್ಷರುಗಳಾದ ಶ್ರೀ ಸದಾನಂದ ಕೆ. ಜಿ. ಅಟ್ಟೆಗೋಳಿ, ಶ್ರೀ ರತ್ನಾಕರ ಶೆಟ್ಟಿ ದೇರಂಬಳ,ಶ್ರೀ ಸುರೇಶ್ ಶೆಟ್ಟಿ ಒಲಸರಿಗದ್ದೆ,ಶ್ರೀ ಕೃಷ್ಣ ಪರಂಬಳ,ಹಿರಿಯರಾದ ಶ್ರೀ ಶ್ರೀಧರ ಹೊಳ್ಳ ಕಯ್ಯಾರು, ಶ್ರೀ ರವಿರಾಜ್ ನ್ಯಾಕ್ ಗುಂಡಿಬೈಲು,, ಶ್ರೀ ನಾರಾಯಣ ಶೆಟ್ಟಿ ಬೊಳಂಪಾಡಿ,ಶ್ರೀ ಬಾಲಕೃಷ್ಣ ಶೆಟ್ಟಿ ಅಟ್ಟೆಗೋಳಿ,ಶ್ರೀ ಜಗನಿವಾಸ್ ಆಳ್ವ ಸಣ್ಣತಡ್ಕ ಮತ್ತು ಸೇವಾಭಾರತಿ ಹಾಗೂ ಉತ್ಸವ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೇವಾಭಾರತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಶೆಟ್ಟಿ ಪಿಲಿಯಂದೂರು ಸ್ವಾಗತಿಸಿ ಜೊತೆ ಕಾರ್ಯದರ್ಶಿ ಹರೀಶ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ನಿಖಿಲ್ ಸುಲಾಯ ರವರು ವಂದಿಸಿದರು





