ರಾಯರ ತತ್ತ್ವಗಳು ಮತ್ತು ಅವರು ತೋರಿದ ಧರ್ಮದ ಹಾದಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ – ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು

Share with

ಮಂಜೇಶ್ವರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ

ಮಂಜೇಶ್ವರ: ರಾಯರ ತತ್ತ್ವಗಳು ಮತ್ತು ಅವರು ತೋರಿದ ಧರ್ಮದ ಹಾದಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ” ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ನುಡಿದರು. ಅವರು ನಿನ್ನೆ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದದಲ್ಲಿ ಅನುಗ್ರಹ ಸಂದೇಶ ಸಾರಿದರು.

ಗುರು ರಾಘವೇಂದ್ರ ಸ್ವಾಮಿಗಳು ಜಾತಿ, ಮತ ಭೇದವಿಲ್ಲದೆ ಇಡೀ ಮಾನವಕುಲವನ್ನು ಹರಸುವ ಜಗದ್ಗುರುಗಳಾಗಿದ್ದಾರೆ. ಅವರ ಆದರ್ಶಗಳು ಮತ್ತು ಕೃತಿಗಳು ಸಮಾಜಕ್ಕೆ ಸದಾ ದಾರಿದೀಪ” ಎಂದು ಅವರು ನುಡಿದರು. ಶ್ರೀ ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವದ ಅಂಗವಾಗಿ ಪ್ರಧಾನ ಋತ್ವಿಜರಾದ ಶ್ರೀ ಯಾದವ ಶರ್ಮಾ ನೀರ್ಚಾಲ್ ರವರ ಪೌರೋಹಿತ್ಯದಲ್ಲಿ ಶ್ರೀ ಗುರು ರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಶಶಿಧರ ಶೆಟ್ಟಿ ಜಮ್ಮದ ಮನೆ (ಸುರತ್ಕಲ್), ಆಡಳಿತ ಮೊಕ್ತೇಸರರು: ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಜಮ್ಮದಮನೆ ಹೊಸಬೆಟ್ಟು, ಮಂಜೇಶ್ವರ, ಶ್ರೀಮತಿ ಅಶ್ವಿನಿ ಎಂ.ಎಲ್ (ಅಧ್ಯಕ್ಷೆ, ಬಿ.ಜೆ.ಪಿ ಕಾಸರಗೋಡು ಜಿಲ್ಲಾ ಸಮಿತಿ), ಶ್ರೀಮತಿ ಸುಂದರಿ ಆರ್ ಶೆಟ್ಟಿ (ಮಾಜಿ ಅಧ್ಯಕ್ಷೆ, ಮೀಂಜ ಗ್ರಾಮ ಪಂಚಾಯತು, ಶ್ರೀಮತಿ ಕಮಲಾಕ್ಷಿ ಕೆ.ಪಾವೂರು. (ಉಪಾಧ್ಯಕ್ಷೆ,ಮಂಜೇಶ್ವರ ಬ್ಲಾಕ್ ಪಂಚಾಯತ್.), ಶ್ರೀ ಹೈಮೇಶ್ ಬಿ.ಎಂ (ಗೌರವಾಧ್ಯಕ್ಷರು, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ.), ಶ್ರೀ ಯಾದವ ಬಡಾಜೆ (ಅಧ್ಯಕ್ಷರು, ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ.), ನ್ಯಾಯವಾದಿ ಶ್ರೀ ನವೀನ್ ರಾಜ್ ಕೆ. ಜೆ. (ಅಧ್ಯಕ್ಷರು, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ.), ಶ್ರೀ ಉದಯ ಪಾವಳ (ಗುರುಸ್ವಾಮಿ, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ.), ಶ್ರೀ ಸುದರ್ಶನ ಕುಮಾರ್ ಜೈನ್ (ಪ್ರಮುಖರು, ಜೈನ ಬಸದಿ ಮಂಜೇಶ್ವರ.), ಶ್ರೀ ತುಳಸಿದಾಸ್ ಮಂಜೇಶ್ವರ, (ಅಧ್ಯಕ್ಷರು, ಬಾಕುಡ ಸಮಾಜ ಕೇಂದ್ರೀಯ ಮಂಡಳಿ.) ಮೊದಲಾದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭಾಸಂಶನೆಗೈದರು.

ಈ ವೇಳೆ ರಂಗಭೂಮಿ ಕಲಾವಿದೆ, ಕನ್ನಡ – ತುಳು ಚಲನಚಿತ್ರ ನಟಿ, ನ್ಯಾಷನಲ್ ಫಿಲ್ಡ್ ಅವಾರ್ಡ್ ಪ್ರಶಸ್ತಿ ವಿಜೇತೆ: ರೂಪಶ್ರೀ ವರ್ಕಾಡಿ, ಮತ್ತು ರಾಯರ ಪರಮ ಭಕ್ತ, ಪ್ರಬುದ್ಧ ರಂಗ ಕಲಾವಿದ, ತುಳು – ಕನ್ನಡ, ಚಲನಚಿತ್ರ ನಟ, ನಿರ್ದೇಶಕ: ಶ್ರೀ ಜೆ. ಪಿ ತೂಮಿನಾಡ್ ಇವರಿಗೆ ಗೌರವಾರ್ಪಣೆ ನಡೆಯಿತು. ಜೊತೆಗೆ ಮಕ್ಕಳ ಕಲಿಕೆಗಾಗಿ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕಾಗಿ “ಓಂ ಶ್ರೀ ರಾಘವೇಂದ್ರಾಯ ನಮಃ” ಲೇಖನ ಮಾಲೆಯ ಅನಂತ ಕೋಟಿ ಅಷ್ಟಾಕ್ಷರ ಲೇಖನ ಯಜ್ಞದ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಜೊತೆಗೆ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೀಯಪದವು ಕೊಡಮಾಡಿದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಉಚಿತ ಹೆಲ್ತ್ ಕಾರ್ಡ್ ವಿತರಣೆ ನಡೆಯಿತು. ರಾಯರ ಭಕ್ತರು ಮಂಜೇಶ್ವರದ ಸಂಸ್ಥಾಪಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿ, ರಾಯರ ಭಕ್ತರು ಮಂಜೇಶ್ವರದ ಸ್ಥಾಪಕರಾದ ರಾಜೇಶ್ ಕಡಂಬಾರು ವಂದಿಸಿದರು. ಬಳಿಕ ನೆರೆದ ಭಕ್ತರಿಗೆ ಲಘು ಉಪಹಾರ ವಿತರಿಸಲಾಯಿತು.


Share with

Leave a Reply

Your email address will not be published. Required fields are marked *