ಉಪ್ಪಳ: ಯುವಭಾರತಿ ಸೇವಾ ಸಮಿತಿ ಉಪ್ಪಳ ಇದರ ವಾರ್ಷಿಕ ಮಹಾಸಭೆ ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ನಡೆಯಿತು.
ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಬಾಬು ಶೆಣೈ ಮಂಗಲ್ಪಾಡಿ, ಅಧ್ಯಕ್ಷರಾದ ಲೋಕೇಶ್ ಕೆ.ಕೆ, ಪ್ರಧಾನ ಕಾರ್ಯದರ್ಶಿ ಗಿರೀಶ್ ಮುನ್ನಿಪ್ಪಾಡಿ, ಕೋಶಾಧಿಕಾರಿ ಸಂದೇಶ್ ಕ್ರೃಷ್ಣನಗರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಮುನ್ನಿಪ್ಪಾಡಿ ಲೆಕ್ಕ ಪತ್ರ ಮತ್ತು ನೂತನ ಸಮಿತಿ ಘೋಷಣೆ ಮಾಡಿದರು. ಸಂಘಟನಾ ಕಾರ್ಯದರ್ಶಿ ಜಗದೀಶ ಪ್ರತಾಪನಗರ ಸ್ವಾಗತ ಪರಿಚಯ ಮತ್ತು ಪ್ರಾಸ್ತಾವಿಕ ನಡೆಸಿದರು. ಸುದರ್ಶನ ಕ್ರೃಷ್ಣನಗರ ಪ್ರಾರ್ಥನೆ ಹಾಡಿದರು. ಸಂದೇಶ್ ಕ್ರೃಷ್ಣನಗರ ಧನ್ಯವಾದ ಸಲ್ಲಿಸಿದರು.