ಕುಂಬಳೆ: ಕುಂಬಳೆ ಸಂತ ಮೋನಿಕಾ ಶಾಲೆಯಲ್ಲಿ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಾಲೆಯ ವತಿಯಿಂದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಬಕಾರಿ ಅಧಿಕಾರಿ ಜನಾರ್ದನ್ ಅವರು ಮಾದಕ ದ್ರವ್ಯ ಹಾಗೂ ಅಮಲು ಪದಾರ್ಥ ಸೇವನೆಯಿಂದ ಇಂದಿನ ಯುವ ಪೀಳಿಗೆಯ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲಾ ಅಧಿಕಾರಿಯಾದ ಫಾದರ್ ಅನಿಲ್ ಪ್ರಕಾಶ್, ಶಾಲಾ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರಾದ ಮಹೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಕುಂಬಳೆ ಯೋಜನೆ ಅಧಿಕಾರಿ ರಮೇಶ್ ಹಾಗೂ ಯೋಜನೆಯ ಸೇವಾ ಅಧಿಕಾರಿಗಳು, ಶಾಲಾ ಅಧಿಕಾರಿಗಳು ಭಾಗವಹಿಸಿದ್ದರು.