ಉಪ್ಪಳ: ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಮಂಗಲ್ಪಾಡಿ ಪಂಚಾಯತ್, ಪ್ರಗತಿ ಮತ್ತು ಆದರ್ಶ್ ಕುಟುಂಬ ಶ್ರೀ, ಅಗರ್ತಿಮೂಲೆ ಅಂಗನವಾಡಿ ಕೇಂದ್ರ, ಪಿ.ಟಿ.ಎ ಜಿ.ಎಚ್.ಎಸ್ ಶಾಲೆ ಬೇಕೂರು, ಬಿ.ಎಸ್.ಸಿ ಬೇಕೂರು, ಸೇವಾಭಾರತಿ ಕಲಾವೃಂದ ಮತ್ತು ಅಯೋಧ್ಯ ಪ್ರೆಂಡ್ಸ್ ಕ್ಲಬ್ ಇದರ ಸಹಯೋಗದಲ್ಲಿ ಕ್ಯಾನ್ಸರ್ ತಪಾಸಣೆ-ಅರಿವು ಮತ್ತು ಮಾಹಿತಿ ಶಿಬಿರ ಬೇಕೂರು ಸರಕಾರಿ ಶಾಲೆಯಲ್ಲಿ ನಡೆಯಿತು.
ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನಾ ನೌಫಲ್ ಉದ್ಘಾಟಿಸಿದರು. ಸಮಾಜ ಸೇವಕರಾದ ರಾಮಚಂದ್ರ ಬಲ್ಲಾಳ್, ಅಬ್ದುಲ್ ರಹಿಮಾನ್ಮೊದಲಾದವರು ಅತಿಥಿಗಳಾಗಿದ್ದರು. ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯರಾದ ಡಾ.ಅಭಿಷೇಕ್ ಕೃಷ್ಣ, ಡಾ.ಪ್ರೇರಣಾ.ಬಿ ಮಾಹಿತಿ ಹಾಗೂ ತಪಾಸಣೆಯನ್ನು ಮಾಡಿದರು. ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಹಲವು ಮಂದಿ ಇದರ ಉಪಯೋಗವನ್ನು ಪಡೆದರು.